Lakshminarayana on Gali Janardhan Reddy : ಜೈ ಭಾರತ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಹಾಗೂ ಸಿಬಿಐನ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂಚಲನಕಾರಿ ಆರೋಪ ಮಾಡಿದ್ದಾರೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬ್ಯಾಚ್ ತಮ್ಮ ಕೊಲೆಗೆ ಪ್ಲಾನ್ ಮಾಡಿದೆ ಎಂದು ಎಸ್ಪಿಗೆ ದೂರು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಮಾಜಿ ಸಿಬಿಐ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಅವರು ಸಂವೇದನಾಶೀಲ ಆರೋಪ ಮಾಡಿದ್ದಾರೆ. ಲೋಕ ಸಭಾ ಚುನಾವಣೆ ವೇಳೆ ಲಕ್ಷ್ಮೀ ನಾರಾಯಣ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿಬಿಐನಲ್ಲಿ ಜೆಡಿಯಾಗಿದ್ದಾಗ ಗಾಲಿಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಅವರ ಹಿಂಬಾಲಕರು ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಲಕ್ಷ್ಮೀ ನಾರಾಯಣ ಆರೋಪಿಸಿದ್ದಾರೆ.


ಇದನ್ನೂ ಓದಿ:ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್


ಆಂಧ್ರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ತಾವು ಕಣಕ್ಕಿಳಿದಿರುವ ಮಾಹಿತಿ ಸಿಕ್ಕಿದ್ದು ಈ ಪ್ಲಾನ್ ಮಾಡಿದ್ದಾರೆ ಎಂದು ಜೆಡಿ ಲಕ್ಷ್ಮೀ ನಾರಾಯಣ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.


ಇದೇ ವೇಳೆ ವಿಶಾಖಪಟ್ಟಣಂ ಉತ್ತರದಿಂದ ಜೈ ಭಾರತ್ ನ್ಯಾಶನಲ್ ಪಕ್ಷದ ಪರವಾಗಿ ಸಿಬಿಐ ಮಾಜಿ ಲಕ್ಷ್ಮೀ ನಾರಾಯಣ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯ ಎಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಬಿಐ ಮಾಜಿ ಜೆಡಿ ಲಕ್ಷ್ಮಿ ನಾರಾಯಣ ಮಾಡಿದ ಆರೋಪಗಳು ಎಪಿ ಮತ್ತು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿವೆ.


ಇದನ್ನೂ ಓದಿ:ಇವಿಎಂ, ವಿವಿಪ್ಯಾಟ್‌ಗಳಲ್ಲಿ ಮೈಕ್ರೋಕಂಟ್ರೋಲರ್‌ ಪಕ್ಷ ಮತ್ತು ಅಭ್ಯರ್ಥಿಯನ್ನು ಗುರುತಿಸುವುದಿಲ್ಲ : ಸುಪ್ರೀಂ ಕೋರ್ಟ್‌


ಸಧ್ಯ ಮಾಜಿ ಸಿಬಿಐ ಜೆಡಿ ಲಕ್ಷ್ಮೀ ನಾರಾಯಣ ಅವರು ವಿಶಾಖಪಟ್ಟಣಂ ಉತ್ತರದಿಂದ ಎಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಧ್ಯ ಅವರು ಹತ್ಯೆಗೆ ಸಂಚು ನಡೆದಿದ್ದು, ಗಾಲಿ ಜನಾರ್ದನರೆಡ್ಡಿ ಅವರ ಹಿಂಬಾಲಕರೇ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ವಿಶಾಖಪಟ್ಟಣ ಸಿಪಿಗೆ ದೂರು ಸಲ್ಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.