ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರು ನಡೆಸಿದ ಗುಂಡಿನ ಕಾಳಗದಲ್ಲಿ ಓರ್ವ ಪೋಲಿಸ್ ಇನ್ಸ್ಪೆಕ್ಟರ್ ಹಾಗೂ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಸಿಆರ್ ಪಿಎಫ್ ನ ಇನ್ ಸ್ಪೆಕ್ಟರ್, ಯೋಧ ಹಾಗೂ ಇಬ್ಬರು ಜಮ್ಮು-ಕಾಶ್ಮೀರದ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಬಾಗುಂದ್ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುವಾಗ ಧ್ವಂಸವಾಗಿದ್ದ ಮನೆಯೊಂದರಲ್ಲಿ ಸತ್ತಂತೆ ಬಿದ್ದಿದ್ದ ಭಯೋತ್ಪಾದಕನೊಬ್ಬ ಇದ್ದಕ್ಕಿದ್ದಂತೆ ಎದ್ದು ನಡೆಸಿದ ಗುಂಡಿನ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.


ಈಗಾಗಲೇ ಪುಲ್ವಾಮ ಬಳಿ ಪಾಕ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತಿಯ ವಾಯುಪಡೆ ಕ್ರಮ ಕೈಗೊಂಡು ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. ಇಷ್ಟಾದರೂ ಪಾಕ್ ಉಗ್ರ ಸಂಘಟನೆಗಳು ತಮ್ಮ ಉಪಟಳ ನಿಲ್ಲಿಸದೆ ಮುಂದುವರೆಸಿವೆ. ಇನ್ನು ಕಾರ್ಯಚರಣೆ ವೇಳೆ ಇಬ್ಬರು ಉಗ್ರರನ್ನ ಸೆದೆಬಡೆಯುವಲ್ಲಿ ಭಾರತೀಯ ಯೋಧರು ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.