General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ‘ಜೈ ಭಾರತ ಜನನಿಯ ತನುಜಾತೆ” ಈ ಗೀತೆಯನ್ನು ಬರೆದ ಕವಿ ಯಾರು?


a) ದ.ರಾ.ಬೇಂದ್ರೆ            b) ಹುಯಿಲುಗೋಳು ನಾರಾಯಣರಾಯರು


c) ಕುವೆಂಪು                    d) ಚೆನ್ನವೀರ ಕಣವಿ


ಉತ್ತರ: ಕುವೆಂಪು


ಪ್ರಶ್ನೆ 2. ನಿತ್ಯೋತ್ಸವ ಕವಿ’ ಎಂದು ಹೆಸರಾದವರು ಯಾರು?


a) ನಿಸಾರ್ ಅಹಮದ್                b) ಜಿ.ಎಸ್.ಶಿವರುದ್ರಪ್ಪ


c) ಮೈಸೂರು ಅನಂತಸ್ವಾಮಿ     d) ಗೋವಿಂದ ಪೈ


ಉತ್ತರ: ನಿಸಾರ್ ಅಹಮದ್ 


ಪ್ರಶ್ನೆ 3: ಕನ್ನಡ ಸಾಹಿತ್ಯ ಪರಿಷತ್ತು’ ಸ್ಥಾಪಿಸಿದ್ದು ಯಾರು ದಿವಾನರಾಗಿದ್ದಾಗ?


a) ಪೂರ್ಣಯ್ಯ                b) ಮಿರ್ಜಾ ಇಸ್ಮಾಯಿಲ್


c) ಶೇಷಾದ್ರಿ ಅಯ್ಯರ್    d) ಸರ್ ಎಂ.ವಿಶ್ವೇಶ್ವರಯ್ಯ


ಉತ್ತರ: ಸರ್ ಎಂ.ವಿಶ್ವೇಶ್ವರಯ್ಯ


ಪ್ರಶ್ನೆ 4: ಕರ್ನಾಟಕ ಏಕೀಕರಣವಾದ ವರ್ಷ


a) 1950      b) 1973


c) 1956     d) 1947


ಉತ್ತರ: 1956 


ಪ್ರಶ್ನೆ 5: ಕನ್ನಡ ಆದಿ ಕವಿ ಯಾರು?


a) ರನ್ನ            b) ಪಂಪ


c) ಪೊನ್ನ         d) ಜನ್ನ


ಉತ್ತರ: ಪಂಪ


ಇದನ್ನೂ ಓದಿ: Ram Mandir: ಭವ್ಯ ಶ್ರೀರಾಮ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಪೂರ್ಣ: ಎಷ್ಟೊಂದು ಅದ್ಭುತವಾಗಿದೆ ನೋಡಿ


ಪ್ರಶ್ನೆ 6: ಕನ್ನಡದ ಮೊದಲ ಕವಯತ್ರಿ ಯಾರು?


a) ಎಂ.ಕೆ.ಇಂದಿರಾ     b) ತ್ರಿವೇಣಿ


c) ಮುಕ್ತಾಯಕ್ಕ         d) ಅಕ್ಕಮಹಾದೇವಿ


ಉತ್ತರ: ಅಕ್ಕಮಹಾದೇವಿ


ಪ್ರಶ್ನೆ 7: ಕನ್ನಡದ ಮೊದಲ ಶಾಸನ ಯಾವುದು?


a) ತಾಳಗುಂದ ಶಾಸನ                b) ಹಲ್ಮಿಡಿ ಶಾಸನ


c) ಕಪ್ಪೆ ಅರಭಟ್ಟನ ಶಾಸನ        d) ಬಾದಾಮಿ ಶಾಸನ


ಉತ್ತರ: ಹಲ್ಮಿಡಿ ಶಾಸನ


ಪ್ರಶ್ನೆ 8. ಕನ್ನಡ ಈ ಭಾಷಾವರ್ಗಕ್ಕೆ ಸೇರಿದೆ?


a) ಆರ್ಯನ್                    b) ಏಷ್ಯನ್


c) ಯೂರೋಪಿಯನ್      d) ದ್ರಾವಿಡ


ಉತ್ತರ: ದ್ರಾವಿಡ


ಪ್ರಶ್ನೆ 9: ಕನ್ನಡದ ಮೊದಲ ರಾಜಮನೆತನ ಯಾವುದು?


a) ಗಂಗರು              b) ರಾಷ್ಟ್ರಕೂಟರು


c) ಕದಂಬರು          d) ಹೊಯ್ಸಳರು


ಉತ್ತರ: ಕದಂಬರು


ಪ್ರಶ್ನೆ 10: ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?


a) ಕೆ.ಸಿ.ರೆಡ್ಡಿ                    b) ಎಸ್.ನಿಜಲಿಂಗಪ್ಪ


c) ದೇವರಾಜ ಅರಸು       d) ಎಚ್.ಡಿ.ದೇವೇಗೌಡ


ಉತ್ತರ: ಎಸ್.ನಿಜಲಿಂಗಪ್ಪ


ಇದನ್ನೂ ಓದಿ: Optical Illusion: ಈ ಮರಗಳಲ್ಲಿ ಅಡಗಿರುವ 8 ಪ್ರಾಣಿಗಳನ್ನು ಕಂಡುಹಿಡಿಯುವಿರಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.