ನವದೆಹಲಿ: ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಕಳೆದ ಸುಮಾರು 40 ದಿನ್ಗಗಳಿಂದ ನಾಗರಿಕ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಶೀಘ್ರವೇ ಇದು ಮುಕ್ತಾಯಗೊಂಡು, ನಾಗರಿಕ ವಿಮಾನಯಾನ ಸೇವೆ ಮತ್ತೆ ಆರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಸ್ಪಷ್ಟವಾಗಿ ಈ ಹಿಂದೆ ಇದ್ದ ವ್ಯವಸ್ಥೆಯಯೊಂದಿಗೆ ವಿಮಾನಯಾನ ಸೇವೆಯನ್ನು ಮರುಸ್ಥಾಪಿಸುವುದು ಸಾಧ್ಯವಿಲ್ಲ. ಇದಕ್ಕಾಗಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಲಾಕ್ ಡೌನ್ ಮೊದಲು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆಯುವುದರಿಂದ ಹಿಡಿದು ವಿಮಾನದಲ್ಲಿ ಕುಳಿತುಕೊಳ್ಳುವವರೆಗೆ ವ್ಯವಸ್ಥೆ ಭಿನ್ನವಾಗಿತ್ತು. ಆದರೆ, ಇದೀಗ ಲಾಕ್ ಡೌನ್ ಬಳಿಕ ಚಿತ್ರಣ ಬೇರೆಯೇ ಆಗಿರಲಿದೆ. ಸದ್ಯ ಕಳೆದ 43 ದಿನಗಳಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿರುವ ಕಾರಣ ಎಲ್ಲಾ ಏರ್ಪೋರ್ಟ್ ಗಳು ಖಾಲಿ ಇವೆ.


ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ ಜಿಎಂಆರ್ ಕಂಪನಿಯು ವಿಮಾನ ನಿಲ್ದಾಣವನ್ನು ತೆರೆಯುವ ಸಿದ್ಧತೆಗಳನ್ನು ಸಹ ಪ್ರಾರಂಭಿಸಿದೆ. ಈ ಬಾರಿ ವಿಮಾನ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಸಾಮಾಜಿಕ ಅಂತರ ಕಾಯುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಜೊತೆಗೆ, ಲಗೇಜ್ ಟ್ರಾಲಿಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ಏಕೆಂದರೆ ಯಾವುದೇ ಪ್ರಯಾಣಿಕರು ಈ ಟ್ರಾಲಿಗಳನ್ನು ತಮ್ಮ ಸಾಮಾನುಗಳನ್ನು ಇಟ್ಟುಕೊಳ್ಳಲು ಬಳಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಅವುಗಳ ನೈರ್ಮಲ್ಯಕ್ಕಾಗಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.


ಇದೇ ವೇಳೆ ಯಾವುದೇ ಪ್ರಯಾಣಿಕ ವಿಮಾನ ನಿಲ್ದಾಣದ ಒಳಗೆ ಹೋದಾಗ, ಆತನ ಸಂಪರ್ಕವನ್ನು ಕನಿಷ್ಠಗೊಳಿಸಲು ವಿಮಾನ ನಿಲ್ದಾಣದ ಹೊರಗಡೆಯೇ ಬೋರ್ಡಿಂಗ್ ಪಾಸ್ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗಿದೆ. ಈ ಯಂತ್ರದ ಮೂಲಕ, ಪ್ರಯಾಣಿಕರು ತಮ್ಮ ಪಿಎನ್‌ಆರ್ ಬಳಸಿ ಅಥವಾ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬೋರ್ಡಿಂಗ್ ಪಾಸ್ ಅನ್ನು ಪಡೆಯಬಹುದು ಮತ್ತು ನಂತರ ನೇರವಾಗಿ ಒಳಗೆ ಹೋಗಬಹುದು. ಯಾವಾಗ ಪ್ರಯಾಣಿಕರು ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವ ಸಮಯದಲ್ಲಿ ಸಾಮಾಜಿಕ ಅಂತರ ಅನುಸರಿಸಲು ಗೇಟ್‌ನ ಹೊರಗೆ ಗುರುತುಗಳನ್ನು ಸಹ ಮಾಡಲಾಗುತ್ತಿದೆ.


ವಿಮಾನ ನಿಲ್ದಾಣದ ಒಳಗೆ ಹೋದ ನಂತರವೂ ಯಾತ್ರಿಗಳು ಯಾವುದೇ ರೀತಿಯಲ್ಲಿ ಕರೋನಾ ವೈರಸ್ ಸೋಂಕಿಗೆ ಒಳಗಾಗಬಾರದು ಎಂಬ ಎಚ್ಚರಿಕೆಯನ್ನೂ ಸಹ ವಹಿಸಲಾಗುತ್ತಿದೆ. ಇದಕ್ಕಾಗಿ, ಸ್ಥಳದಿಂದ ಸ್ಥಳಕ್ಕೆ ಸಿಂಪರಣೆ ಮತ್ತು ನೈರ್ಮಲ್ಯೀಕರಣ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈ ಕೆಲಸವು ದಿನದ 24 ಗಂಟೆಗಳ ಕಾಲ ನಡೆಸಲಾಗುವುದು ಮತ್ತು ಈಗಾಗಲೇ ಇದನ್ನು ಪ್ರಾರಂಭಿಸಲಾಗಿದೆ. ಅಷ್ಟೇ ಅಲ್ಲ, ಯಾರಾದರೂ ಸರಕುಗಳನ್ನು ಹೊಂದಿದ್ದರೆ ಮತ್ತು ಆ ವಸ್ತುಗಳನ್ನು ಬ್ಯಾಗೇಜ್ ನಲ್ಲಿ ಇದಬೇಕಾದರೂ ಕೂಡ ವ್ಯವಸ್ಥೆ ಕೂಡ ಮೊದಲಿಗಿಂತ ಭಿನ್ನವಾಗಿ ಮಾಡಲಾಗಿದೆ. ನಿಮ್ಮ ಲಗೇಜ್ ಗೆ ನೀವೇ ಟ್ಯಾಗ್ ಮಾಡಬೇಕಾಗಲಿದೆ.


ಇದರ ನಂತರ, ಪ್ರಯಾಣಿಕನು ಹೆಚ್ಚಿನ ಭದ್ರತಾ ಪರಿಶೀಲನೆಗಾಗಿ ಮುಂದುವರಿಯುವಾಗ, ಭದ್ರತಾ ತಪಾಸಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಗಳು ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಗಳನ್ನು ಬಳಸುವಿಕೆ ಅನಿವಾರ್ಯಗೊಳಿಸಲಾಗಿದೆ. ಏತನ್ಮಧ್ಯೆ, ಭದ್ರತೆಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಸಹ ಕೈಗಳನ್ನು ನಿರಂತರವಾಗಿ ಸ್ಯಾನಿಟೈಸ್ ಮಾಡಲಿದ್ದಾರೆ. ವಿಭಿನ್ನ ವಿಮಾನಯಾನ ಸಂಸ್ಥೆಗಳಿಗೆ ವಿಭಿನ್ನ ಗೇಟ್‌ಗಳನ್ನು ನಿಗದಿಪಡಿಸಲಾಗುತ್ತದೆ ಮತ್ತು ಆ ವಿಮಾನಯಾನ ಪ್ರಯಾಣಿಕರು ಒಂದೇ ಗೇಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಏತನ್ಮಧ್ಯೆ, ಪ್ರಯಾಣಿಕರು ಶೌಚಾಲಯವನ್ನು ಸಹ ಬಳಸಬೇಕಾದರೆ, ಅಲ್ಲಿಯೂ ನೈರ್ಮಲ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ, ಯಾವುದೇ ಪ್ರಯಾಣಿಕರಿಗೆ ಶೌಚಾಲಯದ ಮೂಲಕ ಕರೋನಾ ಸೋಂಕು ಹರಡುವುದಿಲ್ಲ.


ಇದರ ನಂತರ, ನೀವು ವಿಮಾನದ ಕಡೆಗೆ ಚಲಿಸುವಾಗ ಕೂಡ ಸಾಮಾಜಿಕ ಅಂತರ ಅನುಸರಿಸಬೇಕಾಗಲಿದೆ. ಕರೋನಾ ಸೋಂಕು ಹರಡದಂತೆ ತಡೆಯಲು ವಿಮಾನದೊಳಗೆ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು. ನಿರಂತರವಾಗಿ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಸಾಮಾಜಿಕ ದೂರಕ್ಕೆ ಒತ್ತು ನೀಡಲಾಗುವುದು. ವಿಮಾನ ನಿಲ್ದಾಣದ ಹೊರಗಿನಿಂದ ವಿಮಾನದ ಒಳಗಿನವರೆಗೆ ಈ ಬಗ್ಗೆ ನಿರಂತರ ಪ್ರಕಟಣೆಗಳು ನಡೆಯಲಿವೆ. ಆದರೆ ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವಾಲಯವು ಈ ಕುರಿತು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಿದೆ. ವಿಮಾನ ನಿಲ್ದಾಣವನ್ನು ನಿರ್ವಹಿಸುವ ಜಿಎಂಆರ್ ಕಂಪನಿ ಕೂಡ ಈಗಾಗಲೇ ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.