ನವದೆಹಲಿ:ದೇಶಾದ್ಯಂತ ಸೋಮವಾರದಿಂದ ದೇಶೀಯ ನಾಗರಿಕ ವಿಮಾನಯಾನ ಸೇವೆ ಆರಂಭವಾಗುತ್ತಿದೆ. ಏತನ್ಮಧ್ಯೆ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಹಿಮಾಚಲ್ ಪ್ರದೇಶ್, ಜಮ್ಮು-ಕಾಶ್ಮೀರ್ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ವಿಮಾನ ಪ್ರಯಾಣಕ್ಕಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿವೆ. ಇದರ ಅಡಿಯಲ್ಲಿ ದೇಶೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಮನೆ ಸಂಪರ್ಕತಡೆ (ಹೋಮ್ ಕ್ವಾರಂಟೀನ್) ನಿಯಮ ಅನುಸರಿಸುವುದು ಅನಿವಾರ್ಯವಾಗಿದೆ. ಈ ನಿಯಮ ಕರ್ನಾಟಕದಲ್ಲಿ 7 ದಿನಗಳದ್ದಾಗಿದ್ದರೆ, ಇತರೆ ರಾಜ್ಯಗಳಲ್ಲಿ 14 ದಿನ ಹೋಮ್ ಕ್ವಾರಂಟೀನ್ ನಲ್ಲಿ ಇರಬೇಕು.


COMMERCIAL BREAK
SCROLL TO CONTINUE READING

ಯುಪಿ ಸರ್ಕಾರದ ನಿಯಮಗಳಿವೆ
ವಿಮಾನದ ಮೂಲಕ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಉತ್ತರ ಪ್ರದೇಶ ಸರ್ಕಾರ ನಿಯಮ ಮಾಡಿದೆ. ಇದರ ಅಡಿಯಲ್ಲಿ ವಿಮಾನದಲ್ಲಿ ಯುಪಿ ತಲುಪಲು ಮತ್ತು ರಾಜ್ಯದಲ್ಲಿ ಉಳಿಯಲು ಹೋಗುವ ಪ್ರಯಾಣಿಕರು 14 ದಿನಗಳ ಕಾಲ ಹೋಮ್ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ. ಮನೆ ಕ್ಯಾರೆಂಟೈನ್ ಸೌಲಭ್ಯ ಯಾರಿಗೂ ಇಲ್ಲದಿದ್ದರೆ, ಅವರನ್ನು ಸರ್ಕಾರಿ ಮಟ್ಟದಲ್ಲಿ ಮಾಡಿದ ಕ್ವಾರಂಟೀನ್ ವ್ಯವಸ್ಥೆಯಲ್ಲಿ ಇಡಲಾಗುವುದು


ಉತ್ತರಪ್ರದೇಶದಲ್ಲಿ ವಿಮಾನದ ಮೂಲಕ ಬರುವ ಎಲ್ಲಾ ಪ್ರಯಾಣಿಕರು ಏರ್ಪೋರ್ಟ್ ನಿಂದ ಹೊರಡುವ ಮೊದಲು ಉತ್ತರಪ್ರದೇಶದ ವೆಬ್ಸೈಟ್ https://reg.upcovid.in ನಲ್ಲಿ ಪ್ರಮುಖವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಇತ್ಯಾದಿಗಳಲ್ಲಿ ಸಮಸ್ಯೆಗಳಿದ್ದರೆ, ನೀವು 1800-180-514 ಸಂಖ್ಯೆಗೆ ಕಾಲ್ ಮಾಡುವ ಮೂಲಕ  ಸಹಾಯ ಪಡೆಯಬಹುದು.


ಪಂಜಾಬ್ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ 14 ದಿನಗಳ ಕ್ವಾರಂಟೀನ್ 
ವಿಮಾನದ ಮೂಲಕ ರಾಜ್ಯಕ್ಕೆ ಆಗಮಿಸುವ ವ್ಯಕ್ತಿಗಳು 14 ದಿನಗಳ ಕಾಲ ಹೋಮ್ ಕ್ವಾರಂಟೀನ್ ನಲ್ಲಿ ಇರಬೇಕು ಎಂದು ಪಂಜಾಬ್ ಸರ್ಕಾರ ಷರತ್ತು ವಿಧಿಸಿದೆ. ಜಮ್ಮು-ಕಾಶ್ಮೀರ ಸರ್ಕಾರ ಕೂಡ ಎರಡು ವಾರಗಳ ಕ್ವಾರಂಟೀನ್ ನಿಯಮ ವಿಧಿಸಿದೆ. ಮಹಾರಾಷ್ಟ್ರದಲ್ಲಿ ವಿಮಾನಯಾನ ಸೇವೆ ನಿಜವಾಗಿಯೂ ಅಗತ್ಯವಾಗಿರುವವರಿಗೆ ಮಾತ್ರ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಮುಂಬೈನಲ್ಲಿ ಲ್ಯಾಂಡ್ ಮಾಡುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ಲಾಕ್‌ಡೌನ್‌ಗಳ ನಡುವೆ ನಾಳೆಯಿಂದ ದೇಶಾದ್ಯಂತ ವಾಯು ಸೇವೆಗಳು ಪ್ರಾರಂಭವಾಗುತ್ತಿವೆ. ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ. ಆದರೆ ವಿಮಾನಯಾನ ಸಂಸ್ಥೆಗಳ ಬಗ್ಗೆ ವಿವಾದ ಉದ್ಭವಿಸಿದೆ. ಅನೇಕ ರಾಜ್ಯಗಳು ವಿಮಾನಯಾನ ಸೇವೆಯನ್ನು ನೇರವಾಗಿ ಅಲ್ಲದೆ ಹೋದರು ಕೂಡ ಪರೋಕ್ಷವಾಗಿ ವಿರೋಧಿಸಿವೆ.