ನವದೆಹಲಿ: ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ  ಕೇಸ್ ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಖೆರ್ಕಿ ದೌಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ಐಪಿಸಿ 420,467,468,471,120b 13 PC ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಾಗಿದೆ. ರಾಬರ್ಟ್ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈ ಲಿ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾನೆಸರ್ ಡಿಎಸ್ಪಿ ರಾಜೇಶ್ ಕುಮಾರ್ " ನಾವು ನುಹ್ ನಿವಾಸಿಯಾಗಿರುವ ಸುರಿಂದರ್ ಶರ್ಮಾ ಅವರಿಂದ  ಭೂಹಗರಣದ  ವಿಚಾರವಾಗಿ ದೂರುಗಳನ್ನು ಸ್ವೀಕರಿಸಿದ್ದೇವೆ" ಎಂದು ಪಿಟಿಐಗೆ ತಿಳಿಸಿದ್ದಾರೆ.


ಈ ಪ್ರಕರಣದ ಕುರಿತಾಗಿ  ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ " ಇದು ಚುನಾವಣಾ ಸಮಯ ತೈಲ ಬೆಲೆ ಏರಿಕೆಗಳು ಹೆಚ್ಚುತ್ತಿವೆ ,ಆದ್ದರಿಂದ ನನ್ನ ದಶಕದಷ್ಟು ಹಳೆಯದಾದ ವಿಷಯವನ್ನು ತರುವ ಮೂಲಕ ಜನರ ಸಮಸ್ಯೆಗಳನ್ನು ಮರೆ ಮಾಚಲಾಗುತ್ತಿದೆ ಅದರಲ್ಲಿ ಎನಿಸಿದೆ ಹೊಸದು? "ಎಂದು ಅವರು ಪ್ರತಿಕ್ರಿಯಿಸಿದ್ದಾರೆ.