ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ನಿಂದನಾತ್ಮಕ ಹೇಳಿಕೆಯಿಂದ ಅಸಮಾಧಾನಗೊಂಡ ಸಚಿವ ಅನಿಲ್ ಶರ್ಮಾ ಶುಕ್ರವಾರ ಕ್ಯಾಬಿನೆಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ,  ಬಿಜೆಪಿ ಪಕ್ಷದಿಂದಾಗಲೀ ಅಥವಾ ಶಾಸಕ ಸ್ಥಾನಕ್ಕಾಗಲೀ ರಾಜೀನಾಮೆ ನೀಡಿಲ್ಲ.


COMMERCIAL BREAK
SCROLL TO CONTINUE READING

"ಜೈರಾಮ್ ಠಾಕೂರ್ ಅವರು ನಿನ್ನೆ (ಗುರುವಾರ) ನನ್ನ ಕ್ಷೇತ್ರದಲ್ಲಿ, ನನ್ನ ವಿರುದ್ಧವೇ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ನಾನು ಅಸಮಾಧಾನಗೊಂಡಿದ್ದೇನೆ. ಹಾಗಾಗಿ ಇಂದು ಬೆಳಿಗ್ಗೆ ಕ್ಯಾಬಿನೆಟ್'ನಿಂದ ಹೊರಬರಲು ನಿರ್ಧರಿಸಿ, ಅವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ" ಎಂದು ಇಂಧನ ಖಾತೆ ಜವಾಬ್ದಾರಿ ಹೊತ್ತಿದ್ದ ಶರ್ಮಾ ತಿಳಿಸಿದ್ದಾರೆ.


"ನಾನು ಇನ್ನೂ ಬಿಜೆಪಿ ಸದಸ್ಯನಾಗಿದ್ದೇನೆ. ಆದರೆ ಪಕ್ಷದ ಯಾವುದೇ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲ. ಬಿಜೆಪಿ ಬಯಸಿದರೆ ನನ್ನನ್ನು ಪಕ್ಷದಿಂದ ವಜಾ ಮಾಡಬಹುದು" ಎಂದು ಅನಿಲ್ ಶರ್ಮಾ ಹೇಳಿದ್ದಾರೆ.