ನವದೆಹಲಿ: 'ಹಿಟ್ಲರ್ ಮತ್ತು ಮುಸೊಲಿನಿ ಪ್ರಜಾಪ್ರಭುತ್ವದ ಉತ್ಪನ್ನಗಳು, ಆದರೆ ಕಾಲಾನಂತರದಲ್ಲಿ ಪ್ರಜಾಪ್ರಭುತ್ವಗಳು ಪ್ರಬುದ್ಧವಾಗಿವೆ ಎಂದು ಬಿಜೆಪಿ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.


COMMERCIAL BREAK
SCROLL TO CONTINUE READING

ರೈಸಿನಾ ಸಂವಾದದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮಾಧವ್ ' ದೇಶದಲ್ಲಿನ ಪ್ರತಿಭಟನೆಗಳ ಬಗ್ಗೆ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ. ಭಾರತವು 'ಪ್ರಜಾಪ್ರಭುತ್ವ ವಿರೋಧಿ ಪ್ರಜಾಪ್ರಭುತ್ವ'ದತ್ತ ಸಾಗುತ್ತಿದೆಯೇ ? ಎಂದು ಅವರನ್ನು ಸಭಿಕರೊಬ್ಬರು ಕೇಳಿದರು.ಈ ಪ್ರಶ್ನೆಗೆ ಉತ್ತರಿಸುತ್ತಾ ಮಾಧವ್ 'ಹಿಟ್ಲರ್ ಮತ್ತು ಮುಸ್ಸೊಲಿನಿ ಪ್ರಜಾಪ್ರಭುತ್ವದ ಉತ್ಪನ್ನಗಳು. ಆಗಿನಿಂದ ಈಗಿನ ವರೆಗೆ ಜಗತ್ತಿನಲ್ಲಿ ಕೇವಲ ಜಗತ್ತಿನಲ್ಲಿ ಉದಾರವಾದಿ ಪ್ರಜಾಪ್ರಭುತ್ವವು ಜಗತ್ತಿನಲ್ಲಿದೆ. ಕಾಲಾಂತಾರದಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ' ಎಂದು ಹೇಳಿದರು 


 


 



ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧದ ಪ್ರತಿಭಟನೆಗಳ ಬಗ್ಗೆ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ 'ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸೋತವರು' ಬೀದಿಗಳನ್ನು ಪ್ರಜಾಪ್ರಭುತ್ವ ವೇದಿಕೆಯಾಗಿ ಪರಿವರ್ತಿಸಿದರು' ಮತ್ತು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.


ಭಾರತೀಯ ಪೌರತ್ವ ನಿಯಮಗಳು 'ತಾರತಮ್ಯರಹಿತ' ಮತ್ತು ವಿವಿಧ ಅವಧಿಯಲ್ಲಿ ಇಲ್ಲಿ ಉಳಿದುಕೊಂಡವರಿಗೆ ಕಾಲಾಂತರದಲ್ಲಿ ನಾಗರಿಕರಾಗಿರಲು ಅವಕಾಶ ಮಾಡಿಕೊಟ್ಟಿದೆ.'ಭಾರತವು ರೋಮಾಂಚಕ ಮತ್ತು ಉತ್ತಮ ಸಂವಿಧಾನವನ್ನು ಹೊಂದಿದೆ ಮತ್ತು 'ನಾವೆಲ್ಲರೂ ಅದನ್ನು ಮದುವೆಯಾಗಿದ್ದೇವೆ" ಎಂದು ಮಾಧವ್ ಹೇಳಿದರು. ಭಾರತೀಯ ಪ್ರಜಾಪ್ರಭುತ್ವವು ಮತ್ತಷ್ಟು ಪ್ರಗತಿ ಸಾಧಿಸುತ್ತದೆ ಮತ್ತು ಪ್ರಬುದ್ಧವಾಗಿರುತ್ತದೆ ಎಂದು ಅವರು ಹೇಳಿದರು. 



ಪ್ರತಿಪಕ್ಷಗಳನ್ನು ತರಾಟೆಗೆ ತಗೆದುಕೊಂಡ ಅವರು 'ನೀವು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸೋತಿದ್ದೀರಿ ಮತ್ತು ಬೀದಿಗಳನ್ನು ಪ್ರಜಾಪ್ರಭುತ್ವ ವೇದಿಕೆಯನ್ನಾಗಿ ಪರಿವರ್ತಿಸುತ್ತೀರಿ, ಸರ್ಕಾರ ಆಲಿಸುತ್ತಿಲ್ಲ ಎಂದು ಹೇಳಿ ಹಿಂಸಾಚಾರದಲ್ಲಿ ಪಾಲ್ಗೊಳ್ಳುತ್ತೀರಿ, ಅದು ಪ್ರಜಾಪ್ರಭುತ್ವದ ಮನೋಭಾವವಲ್ಲ' ಎಂದು ಅವರು ಹೇಳಿದರು. ಸಂಸತ್ತಿನಲ್ಲಿ ಸಮಗ್ರ ಚರ್ಚೆಯ ನಂತರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅತ್ಯಂತ ಪ್ರಜಾಪ್ರಭುತ್ವ ರೀತಿಯಲ್ಲಿ ಅಂಗೀಕರಿಸಲಾಯಿತು ಎಂದು ಮಾಧವ್ ಪ್ರತಿಪಾದಿಸಿದರು.ಚರ್ಚೆಯ ಸಮಯದಲ್ಲಿ ಟೀಕೆಗಳಿಗೆ ಸರ್ಕಾರ ಸ್ಪಂದಿಸಿತು ಎಂದು ಅವರು ಉತ್ತರಿಸಿದರು.


ಪ್ರಜಾಪ್ರಭುತ್ವವು ಯಶಸ್ವಿಯಾಗಲು ಅನೇಕ ಸಂಸ್ಥೆಗಳು ಬೇಕಾಗುತ್ತವೆ, ಭಾರತದಲ್ಲಿ 'ಸಾಮಾಜಿಕ ಮಟ್ಟದಲ್ಲಿ ಸಹಸ್ರಮಾನಗಳ ಪ್ರಜಾಪ್ರಭುತ್ವ ಸಂಸ್ಥೆಗಳು ಪ್ರಜಾಪ್ರಭುತ್ವ ಮನೋಭಾವವನ್ನು ಪೋಷಿಸಿವೆ" ಎಂದು ಮಾಧವ್ ಹೇಳಿದರು.


'ಭಾರತ ಯಾವಾಗಲೂ ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುತ್ತಿದೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಜನರ ಹಕ್ಕನ್ನು ಬೆಂಬಲಿಸುತ್ತದೆ ಎಂದು ಮಾಧವ್ ಹೇಳಿದರು. ಆದಾಗ್ಯೂ, ಯಾವುದೇ ನಿರ್ದಿಷ್ಟ ದೇಶದ ವಿರುದ್ಧ ಬಳಸಲು ಪ್ರಜಾಪ್ರಭುತ್ವವನ್ನು ರಾಜಕೀಯ ಕೋಲು ಅಥವಾ ರಾಜಕೀಯ ಅಸ್ತ್ರವಾಗಿ ಬಳಸಬಾರದು ಎಂದು ಅವರು ಹೇಳಿದರು.