ನವ ದೆಹಲಿ: ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ದೆಹಲಿ ಹೈ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹನಿಪ್ರೀತ್ ಪರ ವಕೀಲ ಪ್ರದೀಪ್ ಆರ್ಯ, ನಿರೀಕ್ಷಣ ಜಾಮೀನು ಅರ್ಜಿಗೆ ಸಹಿ ಹಾಕಲು ತಮ್ಮ ಕಚೇರಿಗೆ ಬಂದಿದ್ದರು. ಆಕೆ ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. 


ಸೆಪ್ಟೆಂಬರ್ ತಿಂಗಳಿನಲ್ಲಿ ಹರಿಯಾಣ ಪೊಲೀಸರು ಬಿಡುಗಡೆ ಮಾಡಿದ 43 ಜನರ 'ವಾಂಟೆಡ್ ಲಿಸ್ಟ್' ನಲ್ಲಿ ಹನಿಪ್ರೀತ್ ಹೆಸರೂ ಸಹ ಇದೇ. ಸ್ವಘೋಷಿತ ದೇವ ಮಾನವ ಗುರ್ಮಿತ್ ರಾಮ್ ರಹಿಮ್ ಗೆ ಶಿಕ್ಷೆ ಪ್ರಕಟಗೊಂಡ ನಂತರ ಉಂಟಾದ ಹಿಂಸಾಚಾರದಲ್ಲಿ ಹನಿಪ್ರೀತ್ ಕೈವಾಡ ಇತ್ತು ಎಂಬ ಆರೋಪದ ಮೇರೆಗೆ ಹನಿಪ್ರೀತ್ ಹೆಸರನ್ನು ವಾಂಟೆಡ್ ಲಿಸ್ಟ್ ನಲ್ಲಿ ಸೇರಿಸಲಾಗಿದೆ. 


ಮತ್ತೊಂದೆಡೆ, ಪಂಚಕುಲ ಪೋಲಿಸರು ಇಂದು ದೆಹಲಿಯ ಅನೇಕ ಸ್ಥಳಗಳಲ್ಲಿ ಹನಿಪ್ರೀತ್ ಗಾಗಿ ದಾಳಿ ನಡೆಸಿದ್ದಾರೆ.