ಹರಿಯಾಣ: ಪಂಚಕುಲ ಗಲಭೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಂ ಅವರ ಆಪ್ತ ಸಹಾಯಕಿ ಹನಿಪ್ರೀತ್‌ಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿಗೆ. ಈ ಪ್ರಕರಣದಲ್ಲಿ ನ್ಯಾಯಾಲಯ ಹನಿಪ್ರೀತ್‌ಗೆ ಜಾಮೀನು ನೀಡಿದೆ. ದೇಶದ್ರೋಹದ ಆರೋಪ ಹೊರಿಸಲ್ಪಟ್ಟ 4 ದಿನಗಳ ನಂತರ ಬುಧವಾರ ನ್ಯಾಯಾಲಯದಲ್ಲಿ  ಅವರು ತಮ್ಮ ವಾದವನ್ನು ಮಂಡಿಸಿದರು. 


COMMERCIAL BREAK
SCROLL TO CONTINUE READING

ಹನಿಪ್ರೀತ್‌ಗೆ ಜಾಮೀನು:
2017 ರಲ್ಲಿ ಪಂಚಕುಲದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊತ್ತಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರ ಆಪ್ತ ಸಹಾಯಕಿ ಹನಿಪ್ರೀತ್ ಅವರಿಗೆ ಪಂಚಕುಲ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಗುರ್ಮೀತ್ ರಾಮ್ ರಹೀಂ ಅವರನ್ನು ಸಾಧ್ವಿಸ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಪಡಿಸಿದ ನಂತರ ಪಂಚಕುಲದಲ್ಲಿ ಹಿಂಸಾಚಾರದ ಪ್ರಕರಣದಲ್ಲಿ, ಹನಿಪ್ರೀತ್ ವಿರುದ್ಧ ದೇಶದ್ರೋಹ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹನಿಪ್ರೀತ್ ಮುಖ್ಯ ಆರೋಪಿ ಆಗಿದ್ದಾರೆ. ಕಳೆದ ವಿಚಾರಣೆಯಲ್ಲಿ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ಸಂಖ್ಯೆ 345 ರಲ್ಲಿ ಹನಿಪ್ರೀತ್ ವಿರುದ್ಧ ದೇಶದ್ರೋಹದ 121 ಮತ್ತು 121 ಎ ವಿಭಾಗಗಳನ್ನು ತೆಗೆದುಹಾಕಲಾಗಿದೆ. ಉಳಿದಿ ಪ್ರಕರಣಗಳಲ್ಲಿ ಹನಿಪ್ರೀತ್‌ಗೆ ಜಾಮೀನು ಸಿಕ್ಕಿದೆ. 



ಹನಿಪ್ರೀತ್ ಪರ ವಕೀಲರು ನ.6ರಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಇದರಲ್ಲಿ ಹನಿಪ್ರೀತ್ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರು ಪಡಿಸಲಾಯಿತು. ತಲಾ ಒಂದು ಲಕ್ಷದ ಎರಡು ಜಾಮೀನು ಬಾಂಡ್‌ಗಳ ಮೇಲೆ ಜಾಮೀನು ನೀಡಲಾಗಿದೆ. ತಲಾ 1 ಲಕ್ಷ ಮೌಲ್ಯದ 2 ಜಾಮೀನು ಬಾಂಡ್‌ಗಳನ್ನು ಭರ್ತಿ ಮಾಡಲಾಗಿದೆ ಎಂದು ಹನಿಪ್ರೀತ್ ಪರ ವಕೀಲರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪಂಚಕುಲ ನ್ಯಾಯಾಲಯದಿಂದ ಜಾಮೀನು ಪಡೆದ ಸ್ವಲ್ಪ ಸಮಯದ ನಂತರ ಹನಿಪ್ರೀತ್ ಹೊರಬಂದಿದ್ದಾರೆ.



ನವೆಂಬರ್ 20 ರಂದು ಮುಂದಿನ ವಿಚಾರಣೆ:
ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 20 ರಂದು ನಡೆಯಲಿದೆ. ಪೊಲೀಸರು ಈ ಹಿಂದೆ 1200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದರಲ್ಲಿ ಹನಿಪ್ರೀತ್ ಅವರ ಸಹಚರರಾದ ಸುಖ್ದೀಪ್ ಕೌರ್, ರಾಕೇಶ್ ಕುಮಾರ್ ಅರೋರಾ, ಸುರೇಂದ್ರ ಧೀಮಾನ್ ಇನ್ಸಾ, ಚಮಕೌರ್ ಸಿಂಗ್, ಡಾನ್ ಸಿಂಗ್, ಗೋವಿಂದ್ ರಾಮ್, ಪ್ರದೀಪ್ ಗೋಯಲ್ ಮತ್ತು ಖೈರತಿ ಲಾಲ್ ಅವರ ಮೇಲೂ ಆರೋಪಗಳ ಪಟ್ಟಿ ಮಾಡಲಾಗಿದೆ.


ಹನಿಪ್ರೀತ್ ಯಾರು?
ಪ್ರಿಯಾಂಕಾ ತನೇಜಾ ಎಂಬುದು ಬಾಬಾ ರಾಮ್ ರಹೀಂ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ರ ನಿಜವಾದ ಹೆಸರು. ಹರಿಯಾಣದ ಫತೇಹಾಬಾದ್ ನಿವಾಸಿಯಾದ ಅವರ ತಂದೆಯ ಹೆಸರು ರಾಮಾನಂದ್ ತನೇಜಾ. ಹನಿಪ್ರೀತ್ ಮೊದಲ ಬಾರಿಗೆ 1996 ರಲ್ಲಿ ಡೇರಾ ಕಾಲೇಜಿನಲ್ಲಿ 11 ನೇ ತರಗತಿಯಲ್ಲಿ ಅಧ್ಯಯನಕ್ಕೆ ಬಂದರು. ಪ್ರಿಯಾಂಕಾ ತನೇಜಾ ಶಿಬಿರಕ್ಕೆ ಬಂದಾಗ, ಅದೇ ವರ್ಷ ರಾಮ್ ರಹೀಮ್ ಶಾಲೆಗೆ ಬಂದಿದ್ದರು. ಅವರ ಕಣ್ಣುಗಳು ಪ್ರಿಯಾಂಕಾ ಮೇಲೆ ಇದ್ದವು. ಅದರ ನಂತರ ಅತ್ಯಾಚಾರಿ ಬಾಬಾ ಅವರಿಗೆ ಹನಿಪ್ರೀತ್ ಎಂದು ಹೆಸರಿಟ್ಟರು.


ಬಾಬಾ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ರನ್ನು 'ಬೇಬಿ ಡಾರ್ಲಿಂಗ್' ಎಂದು ಕರೆಯುತ್ತಾನೆ.

ಹನಿಪ್ರೀತ್ ಅವರನ್ನು ಬಾಬಾ ರಾಮ್ ರಹೀಮ್ ಅವರು ಫೆಬ್ರವರಿ 14, 1999 ರಂದು ವಿಶ್ವಾಸ್ ಗುಪ್ತಾ ಅವರೊಂದಿಗೆ ವಿವಾಹ ಮಾಡಿಸಿದರು. ಆದರೆ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿಲ್ಲ. ಈ ಬಗ್ಗೆ ಹನಿಪ್ರೀತ್ ಬಾಬಾಗೆ ದೂರು ನೀಡಿದ್ದು, ಆತ ವರದಕ್ಷಿಣೆಗಾಗಿ ಪೀಡಿಸುತ್ತಿರುವುದಾಗಿ ಆರೋಪಿಸಿದರು. ಬಾಬಾ ಅವರೇ ಹನಿಪ್ರೀತ್ ಮತ್ತು ವಿಶ್ವಾಸ್ ಅವರಿಗೆ ಮದುವೆ ಮಾಡಿಸಿದ್ದರಾದರೂ, ಇಬ್ಬರೂ ಎಂದಿಗೂ ಒಟ್ಟಿಗೆ ಇರಲಿಲ್ಲ. ಇದರ ನಂತರ, ರಾಮ್ ರಹೀಮ್ 2009 ರಲ್ಲಿ ಹನಿಪ್ರೀತ್ ಅನ್ನು ದತ್ತು ಪಡೆದರು. ರಾಮ್ ರಹೀಂಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಸ್ಮೀತ್, ಅಮಾನ್‌ಪ್ರೀತ್ ಮತ್ತು ಚಮನ್‌ಪ್ರೀತ್ ಇನ್ಸಾ ಅವರ ಹೆಸರುಗಳು.


ಹನಿಪ್ರೀತ್ ಅವರ ಪತಿ ವಿಶ್ವಾಸ್ ಗುಪ್ತಾ ಅವರು 2011 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಬಾಬಾ ಉದ್ಯೋಗದಿಂದ ಹನಿಪ್ರೀತ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ರಾಮ್ ರಹೀಂ ಅವರು ಹನಿಪ್ರೀತ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ಪತಿ ವಿಶ್ವಾಸ್ ಆರೋಪಿಸಿದ್ದಾರೆ.


ಆಗಸ್ಟ್ 25, 2017 ರಂದು, ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದಿತು, ಇದರಲ್ಲಿ 36 ಜನರು ಪ್ರಾಣ ಕಳೆದುಕೊಂಡರು ಮತ್ತು ಪೆಟ್ರೋಲ್ ಪಂಪ್ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಘಟನೆ ನಡೆದ 38 ದಿನಗಳ ನಂತರ ಹನಿಪ್ರೀತ್‌ನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಯಿತು. ಅದರ ನಂತರ ಹನಿಪ್ರೀತ್‌ಗೆ ನವೆಂಬರ್ 6, 2019ರಂದು  ಜಾಮೀನು ನೀಡಲಾಗಿದೆ.