ನವದೆಹಲಿ: ಕೃಷಿ ಮಸೂದೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ರೈತರ ಬಗ್ಗೆ ಸರ್ಕಾರ ಮತ್ತು ಸಂಸತ್ತು ಹೆಚ್ಚಿನ ಗೌರವವನ್ನು ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.ತಮ್ಮ ಮಾತುಕತೆಯನ್ನು ಪುನರಾರಂಭಿಸುವಂತೆ ಆಂದೋಲನ ಮಾಡುವ ರೈತರಿಗೆ ಹೊಸ ಮನವಿ ಮಾಡುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಧಾನಿ ಮೋದಿ ಆಂದೋಲನ ಜೀವಿ ಹೇಳಿಕೆಗೆ ಹೊಸ ಟ್ವಿಸ್ಟ್ ನೀಡಿದ ರಾಹುಲ್ ಗಾಂಧಿ


ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳು ಹೇಳುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಪಿಎಂ ಮೋದಿ,"ನಾನು ಕಿಸಾನ್ ಆಂದೋಲನವನ್ನು 'ಪವಿತ್ರ' ಎಂದು ಪರಿಗಣಿಸುತ್ತೇನೆ.ಆದರೆ ಆಂದೋಲನ ಜೀವಿಗಳು ಈ ಪ್ರತಿಭಟನೆ (Farmers protest) ಯನ್ನು ಹೈಜಾಕ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.


ಇನ್ನೂ ಮುಂದುವರೆದು 'ಪವಿತ್ರ ಪ್ರತಿಭಟನೆಗಳ ಸಂದರ್ಭದಲ್ಲಿ ಭಯೋತ್ಪಾದನೆಯಂತಹ ಗಂಭೀರ ಅಪರಾಧಗಳಿಗೆ ಜೈಲುವಾಸ ಅನುಭವಿಸಿದವರ ಫೋಟೋಗಳನ್ನು ಪ್ರದರ್ಶಿಸುವುದು, ಇದು ಯಾವುದೇ ಉದ್ದೇಶವನ್ನು ಪೂರೈಸುತ್ತದೆಯೇ? ಟೋಲ್ ಪ್ಲಾಜಾಗಳನ್ನು ಕೆಲಸ ಮಾಡಲು ಅನುಮತಿಸದಿರುವುದು, ಪಂಜಾಬ್‌ನಲ್ಲಿ ಟೆಲಿಕಾಂ ಟವರ್‌ಗಳನ್ನು ನಾಶಪಡಿಸುವುದು, ಅದು 'ಪವಿತ್ರ ಆಂದೋಲನದ ಸೇವೆ ಸಲ್ಲಿಸುತ್ತದೆಯೇ?  ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: Farmers Protest ಪ್ರತಿಷ್ಠೆ ಆಗಬಾರದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು: ಎಚ್.ಡಿ. ದೇವೇಗೌಡ


'ಈ ರೈತರ ಪವಿತ್ರ ಆಂದೋಲನವು ಆಂದೋಲನ ಜೀವಿಗಳಿಂದ ಹಾಳಾಗಿದೆ ಮತ್ತು' ಆಂದೋಲನಕಾರಿಗಳಿಂದಲ್ಲ, ಆದ್ದರಿಂದ, ರಾಷ್ಟ್ರವು' ಆಂದೋಲನ ಜೀವಿ 'ಮತ್ತು'  ಆಂದೋಲನಕಾರಿಗಳ 'ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಅವಶ್ಯಕವಾಗಿದೆ ಎಂದು ಪಿಎಂ ಮೋದಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮೊದಲು ಮಾತುಕತೆಗಾಗಿ ಟೇಬಲ್‌ಗೆ ಬರಬೇಕೆಂದು ಆಂದೋಲನ ಮಾಡುವ ರೈತರಿಗೆ ಅವರು ಮತ್ತೊಮ್ಮೆ ಮನವಿ ಮಾಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.