ನವದೆಹಲಿ: ನವೆಂಬರ್ 18 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, 2019 ರ ಈ ಕೊನೆಯ ಅಧಿವೇಶನ ಬಹಳ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ್ದೇನೆ  ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಹಿಂದಿನ ಅಧಿವೇಶನದಂತೆ, ಈ ಬಾರಿಯೂ ಸಹ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ನಿರೀಕ್ಷಿಸಲಾಗಿದೆ. ರಾಜ್ಯಸಭೆಯ 250 ನೇ ಅಧಿವೇಶನವೂ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಅಧಿವೇಶನವು ದೇಶಕ್ಕೆ ಜಾಗೃತಿ ಅಭಿಯಾನವಾಗಬಹುದು ಎಂದು ಹೇಳಲಾಗುತ್ತಿದೆ.



COMMERCIAL BREAK
SCROLL TO CONTINUE READING

ಇದರೊಂದಿಗೆ ಪಿಎಂ ಮೋದಿ ಅವರು ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಹೇಳಿದರು. ಸಂವಿಧಾನ ದಿನದ 70 ವರ್ಷಗಳು ಸದನದ ಮೂಲಕ ದೇಶವಾಸಿಗಳಿಗೆ ಜಾಗೃತಗೊಳಿಸುವ ಸಂದರ್ಭವಾಗಬಹುದು. ಎಲ್ಲರ ಸಕ್ರಿಯ ಮತ್ತು ಸಕಾರಾತ್ಮಕ ಪಾತ್ರದಿಂದಾಗಿ ಕೊನೆಯ ಅಧಿವೇಶನ ಅಭೂತಪೂರ್ವವಾಗಿತ್ತು. ಈ ಸಾಧನೆ ಇಡೀ ಸಂಸತ್ ಗೆ ಸೇರಿದೆ. ಎಲ್ಲಾ ಸಂಸದರ ಸಕ್ರಿಯ ಬೆಂಬಲದಿಂದಾಗಿ, ಕೊನೆಯ ಅಧಿವೇಶನವು ಅಭೂತಪೂರ್ವವಾಗಿತ್ತು. ಅಂತೆಯೇ, ಈ ಅಧಿವೇಶನವು ಸಕಾರಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲಾ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಮುಖ್ಯ. ಹಾಗಾಗಿ ಉತ್ತಮ ಚರ್ಚೆ ಅವಶ್ಯಕ ಎಂದ ಅವರು ಸಕಾರಾತ್ಮಕವಾಗಿ ಪಾಲ್ಗೊಳ್ಳುವಂತೆ ಎಲ್ಲಾ ಸಂಸದರಿಗೂ ಕರೆ ನೀಡಿದರು.


27 ಮಸೂದೆಗಳ ಪರಿಚಯ:
ಚಳಿಗಾಲದ ಅಧಿವೇಶನವು ನವೆಂಬರ್ 18 ರಿಂದ ಡಿಸೆಂಬರ್ 13 ರವರೆಗೆ ನಡೆಯುತ್ತದೆ. ಈ ಸಮಯದಲ್ಲಿ, ಚಳಿಗಾಲದ ಅಧಿವೇಶನದಲ್ಲಿ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆ ಸೇರಿದಂತೆ 27 ಪ್ರಮುಖ ಮಸೂದೆಗಳನ್ನು ಪರಿಚಯಿಸಲಿದೆ. ಪೌರತ್ವ ಕಾನೂನಿನ ಬದಲಾವಣೆಗಳ ಮೂಲಕ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳದ ನಂತರ ಭಾರತಕ್ಕೆ ಬಂದಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಂತಹ ಮುಸ್ಲಿಮೇತರರಿಗೆ ಶಾಶ್ವತ ಪೌರತ್ವ ನೀಡಲು ಸರ್ಕಾರ ಬಯಸಿದೆ. ಮೋದಿ ಸರ್ಕಾರ ಕಳೆದ ಅವಧಿಯಲ್ಲೂ ಪೌರತ್ವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು, ಆದರೆ ವಿರೋಧ ಪಕ್ಷಗಳ ವಿರೋಧದಿಂದಾಗಿ ಅದನ್ನು ಮುಂದಕ್ಕೆ ತರಲು ಸಾಧ್ಯವಾಗಲಿಲ್ಲ.