ರಾಂಚಿ: ಜಾರ್ಖಂಡ್‌ನ‌ ಸರಾಯ್‌ಕೆಲ್ಲಾದ ಕುಛಾಯ್‌ ಪ್ರದೇಶದಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟಗೊಂಡು 11 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ 4:43ರ ವೇಳೆಗೆ ಸಂಭವಿಸಿದೆ.



COMMERCIAL BREAK
SCROLL TO CONTINUE READING

ಈ ಸ್ಫೋಟದಲ್ಲಿ ಗಾಯಗೊಂಡಿರುವವರಲ್ಲಿ 8 ಮಂದಿ ವಿಶೇಷ ಕಾರ್ಯಾಚರಣೆ  209 ಕೋಬ್ರಾ ಪಡೆಯವರು, ಮೂರು ಮಂದಿ ಜಾರ್ಖಂಡ್‌ ಪೊಲೀಸರು ಎಂದು ತಿಳಿದು ಬಂದಿದೆ. ಸ್ಫೋಟ ಸಂಭವಿಸಿದ ವೇಳೆ ಭದ್ರತಾ ಸಿಬ್ಬಂದಿ ವಿಶೇಷ ಕಾರ್ಯಾಚರಣೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ.


ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆಯು ನಡೆಯುತ್ತಿದೆ ಎಂದು ANI ವರದಿ ಮಾಡಿದೆ. ಭದ್ರತಾ ಸಿಬ್ಬಂದಿ ತೆಗೆದುಕೊಂಡ ಕ್ರಮಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ ವಾರ ಕೂಡ ನಕ್ಸಲರು ದಾಳಿ ನಡೆಸಿ ಮೂರು ಭದ್ರತಾ ಸಿಬ್ಬಂದಿಗಳನ್ನು ಕೊಂದಿದ್ದರು.