ನವದೆಹಲಿ: ಖ್ಯಾತ ನಟ ಅಂಬರೀಶ್ ಸಾವಿನ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಾಫರ್ ಅವರು ಇಹಲೋಕ ತ್ಯಜಿಸಿದ್ದು, ಕಾಂಗ್ರೆಸ್‌ ಪಾಲಿಗೆ ಇದು ದುರಂತದ ದಿನ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ನಮ್ಮ ಕುಟುಂಬದ ಇನ್ನೊಬ್ಬ ಹಿರಿಯ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಸದಸ್ಯರಾದ ಜಾಫರ್ ಶರೀಫ್ ಜಿ ಅವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಸದಸ್ಯರಿಗೆ, ಮಿತ್ರರಿಗೆ ಮತ್ತು ಬೆಂಬಲಿಗರಿಗೆ  ನನ್ನ ಸಂತಾಪಗಳು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.



ಮಾಜಿ ಕೇಂದ್ರ ಸಚಿವ, ರೈಲ್ವೆ ಬ್ರಾಡ್ ಗೇಜ್ ಹರಿಕಾರ ಸಿಕೆ ಜಾಫರ್ ಶರೀಫ್(85) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿಂದು ನಿಧನರಾದರು. 


ಕನ್ನಡ ಚಿತ್ರರಂಗದ ಮೇರು ನಟ, ರೆಬಲ್ ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್(66) ಶನಿವಾರ ರಾತ್ರಿ ನಿಧನರಾದರು.  ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ರಾಹುಲ್, ಕಾಂಗ್ರೆಸ್ ಕುಟುಂಬವು ಅಮೂಲ್ಯವಾದ ಸದಸ್ಯರನ್ನು ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸಿದ್ದಾರೆ.


ಈ ಇಬ್ಬರೂ ನಾಯಕರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ.