ಬೆಂಗಳೂರು: ರಜನಿಕಾಂತ್ ಸಿನಿಮಾಗಳೆಂದರೆ ಸಾಕು ಶಾಲಾ ಕಾಲೇಜು ಮತ್ತು ಆಫೀಸ್ ಗಳಿಗೆ ಒಂದು ರೀತಿಯ ಸ್ವಯಂ ಘೋಷಿತ ರಜೆಯಿದ್ದ ಹಾಗೆ. ಆದರೆ ಬಾರಿ ರಜನಿಕಾಂತ್ ರ ಕಾಲಾ ವಿಚಾರದಲ್ಲಿ ಎಲ್ಲವು ಉಲ್ಟಾ ಪಲ್ಟಾ ಎನ್ನುವಂತಾಗಿದೆ.


COMMERCIAL BREAK
SCROLL TO CONTINUE READING

ಕಾರಣವಿಷ್ಟೇ ಕರ್ನಾಟಕದಲ್ಲಿ ರಜನಿಕಾಂತ್ ಕಾವೇರಿ ವಿಚಾರವಾಗಿ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಒಂದು ರೀತಿಯಲ್ಲಿ ಇದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ  ಕಾಲಾ ಚಿತ್ರ ಈ ಹಿಂದಿನ ರಜನಿ ಚಿತ್ರಗಳಿಗಿಂತ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಇಂದು ಜಗತ್ತಿನಾಧ್ಯಂತ ಸುಮಾರು 2000 ಸಿನಿಮಾ ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು. ಈಗ ಬಾಕ್ಸ್ ಆಫೀಸ್ ಓಪನಿಂಗ್ ಕುರಿತಾಗಿ ಪ್ರತಿಕ್ರಿಯಿಸಿರುವ ನಟ ವಿಶಾಲ್ "ಕಾಲಾ ಚಿತ್ರವನ್ನು  ಕಾವೇರಿ ವಿವಾದದಲ್ಲಿ ಸುಮ್ಮನೆ ತರಲಾಗಿದೆ. ಇದರಿಂದ ಎಷ್ಟು ನಷ್ಟವಾಗಿದೆ ಗೊತ್ತೇ,ಏನೇ ಆಗಲಿ ಇದರ ಕೊನೆಗೆ ರಜನಿ ಸರ್ ರಜನಿ ಸರ್ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದರು.