Kargil Vijay Diwas: ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ ದಿನʼ ಎಂದು ಕರೆಯಲ್ಪಡುವ ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವು ರಕ್ತಸಿಕ್ತ ಮತ್ತು ಸುದೀರ್ಘ ಸಂಘರ್ಷದ ಉದ್ದಕ್ಕೂ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವುದಾಗಿದೆ.
ಕಾರ್ಗಿಲ್ ವಿಜಯ್ ದಿವಸ್ ಮಹತ್ವ


COMMERCIAL BREAK
SCROLL TO CONTINUE READING

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಮಾಡಿದ ಸೈನಿಕರ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು ಆಚರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಡೆದ ಈ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನಿ ಪಡೆಗಳು ರಹಸ್ಯವಾಗಿ ಭಾರತದ ಭೂಪ್ರದೇಶಕ್ಕೆ ನುಗ್ಗಿದಾಗ ಮತ್ತು ಪ್ರಮುಖ ಪರ್ವತ ಹೊರಠಾಣೆಗಳ ನಿಯಂತ್ರಣ ತೆಗೆದುಕೊಂಡಾಗ ಸಂಘರ್ಷವು ಭುಗಿಲೆದ್ದಿತು. ಕಷ್ಟಕರವಾದ ಗುಡ್ಡಗಾಡು ಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯು ವೀರಾವೇಶದಿಂದ ಹೋರಾಡಿತು. 


ಇದನ್ನೂ ಓದಿ: ಇಲ್ಲೊಂದು ದೇವಾಲಯ..ಇಲ್ಲಿ ಹವಾಮಾನ ಮುನ್ಸೂಚನೆ ನಿಖರವಾಗಿ 7 ದಿನಗಳ ಮುಂಚೆಯೇ ತಿಳಿಯುತ್ತೆ!!


ಕಾರ್ಗಿಲ್ ವಿಜಯ್ ದಿವಸ್ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಗೌರವಿಸುತ್ತದೆ. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಸ್ಥೈರ್ಯಕ್ಕೆ ಗೌರವವಾಗಿ ಪ್ರತಿವರ್ಷವೂ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.


ಇದನ್ನೂ ಓದಿ: ವಾಯು ರಕ್ಷಣಾ ರೆಜಿಮೆಂಟ್ ಮೊದಲ ಮಹಿಳಾ ಅಧಿಕಾರಿಯಾಗಿ ಕರ್ನಲ್ ಅಂಶು ಜಮ್ವಾಲ್ ನೇಮಕ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.