ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸುವ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇದು ಕರೋನವೈರಸ್ COVID-19 ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಸುದ್ದಿಗಾರರಿಗೆ ನೀಡಿದ ಭಾಷಣದಲ್ಲಿ ಸಚಿವರು ಲಾಕ್ ಡೌನ್ ನ್ನು 'ಪ್ರಬಲ ಸಾಮಾಜಿಕ ಲಸಿಕೆ' ಎಂದು ಕರೆದರು. ಲಾಕ್‌ಡೌನ್ ನಿಂದಾಗಿ ಪ್ರಕರಣಗಳ ದ್ವಿಗುಣಗೊಳಿಸುವಿಕೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ಲಾಕ್‌ಡೌನ್‌ಗೆ ಮುಂಚಿನ ದ್ವಿಗುಣಗೊಳಿಸುವಿಕೆಯ ಪ್ರಮಾಣವು 3.4 ದಿನಗಳ ನಡುವೆ ಇತ್ತು ಮತ್ತು ಪ್ರಸ್ತುತ ಇದು 13 ದಿನಗಳಿಗಿಂತ ಹೆಚ್ಚಾಗಿದೆ' ಎಂದರು.


ಲಾಕ್‌ಡೌನ್‌ಗೆ ಮೊದಲು ಭಾರತದಲ್ಲಿ ದ್ವಿಗುಣಗೊಳಿಸುವ ದರವು 3.4 ದಿನಗಳ ನಡುವೆ ಇದ್ದರೆ, ಇಂದು ದ್ವಿಗುಣಗೊಳಿಸುವಿಕೆಯ ಪ್ರಮಾಣವು 13 ದಿನಗಳಿಗಿಂತ ಹೆಚ್ಚಾಗಿದೆ.ಲಾಕ್‌ಡೌನ್ ಮತ್ತು ಅದರ ಎಲ್ಲಾ ಮಾರ್ಗಸೂಚಿಗಳು ಪ್ರಬಲ ಸಾಮಾಜಿಕ ಲಸಿಕೆಯಾಗಿ ಕಾರ್ಯನಿರ್ವಹಿಸಿವೆ" ಎಂದು ಅವರು ಹೇಳಿದರು.


'ಸರಿಯಾದ ಸಮಯದಲ್ಲಿ ಭಾರತದಲ್ಲಿ ಲಾಕ್‌ಡೌನ್ ನನ್ನು ಜಾರಿ ತರಲಾಯಿತು. ಇತರ ಅಭಿವೃದ್ಧಿ ಹೊಂದಿದ ದೇಶಗಳು ಈ ನಿರ್ಧಾರ ತೆಗೆದುಕೊಳ್ಳಲು ಹಲವು ದಿನಗಳನ್ನು ವ್ಯರ್ಥ ಮಾಡಿವೆ. ಕೆಲವು ದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಅವರು ಲಾಕ್‌ಡೌನ್ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಹೆಚ್ಚಿನ ಸ್ಥಳಗಳಲ್ಲಿ ಇದು ಭಾಗಶಃ ಲಾಕ್‌ಡೌನ್ ಆಗಿತ್ತು' ಎಂದು ಹರ್ಷವರ್ಧನ್ ಹೇಳಿದರು.


ಈಗ ಭಾರತದಲ್ಲಿ 1,31,868 ಪ್ರಕರಣಗಳು ವರದಿಯಾಗಿದ್ದರೆ, ಇದರಲ್ಲಿ 73,560 ಸಕ್ರಿಯ ಪ್ರಕರಣಗಳು, 54,440 ಚೇತರಿಕೆ ಪ್ರಕರಣಗಳು ಮತ್ತು 3,867 ಸಾವು ನೋವುಗಳು ಸೇರಿವೆ. ಭಾರತದಲ್ಲಿ ಒಟ್ಟು ಚೇತರಿಕೆ ಪ್ರಮಾಣವು ಶೇಕಡಾ 42.28 ರಷ್ಟಿದೆ ಎನ್ನಲಾಗಿದೆ.