ನವದೆಹಲಿ: ಎರಡು ವರ್ಷಗಳಲ್ಲಿ ಆರನೇ ಬಾರಿಗೆ, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತನೊಬ್ಬನಿಗೆ ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ ಉತ್ತಮ ಗುಣಮಟ್ಟದ ವಜ್ರವು ಗಣಿಗಾರಿಕೆಯಲ್ಲಿ ಸಿಕ್ಕಿದೆ,ಈ ಬಾರಿ 6.47 ಕ್ಯಾರೆಟ್ ತೂಕದ ವಜ್ರ ಲಭಿಸಿದೆ.


COMMERCIAL BREAK
SCROLL TO CONTINUE READING

ರೈತ ಪ್ರಕಾಶ್ ಮಜುಂದಾರ್ ಅವರು ಶುಕ್ರವಾರ ಜಿಲ್ಲೆಯ ಜರುವಾಪುರ ಗ್ರಾಮದ ಗಣಿಯಿಂದ ಈ ವಜ್ರವನ್ನು ಕಂಡುಕೊಂಡಿದ್ದಾರೆ ಎಂದು ಉಸ್ತುವಾರಿ ವಜ್ರದ ಅಧಿಕಾರಿ ನೂತನ್ ಜೈನ್ ತಿಳಿಸಿದ್ದಾರೆ.ಮುಂಬರುವ ಹರಾಜಿನಲ್ಲಿ 6.47 ಕ್ಯಾರೆಟ್ ವಜ್ರವನ್ನು ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬೆಲೆ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.


ಶ್ರೀ ಮಜುಂದಾರ್ ಅವರು ಹರಾಜಿನಿಂದ ಪಡೆದ ಮೊತ್ತವನ್ನು ಗಣಿಗಾರಿಕೆಯಲ್ಲಿ ತೊಡಗಿರುವ ತನ್ನ ನಾಲ್ವರು ಪಾಲುದಾರರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದರು."ನಾವು ಐದು ಪಾಲುದಾರರು. ನಾವು 6.47 ಕ್ಯಾರೆಟ್ ತೂಕದ ವಜ್ರವನ್ನು ಪಡೆದುಕೊಂಡಿದ್ದೇವೆ, ಅದನ್ನು ನಾವು ಸರ್ಕಾರಿ ವಜ್ರದ ಕಚೇರಿಯಲ್ಲಿ ಠೇವಣಿ ಇರಿಸಿದ್ದೇವೆ" ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.


ಅವರು ಕಳೆದ ವರ್ಷ 7.44 ಕ್ಯಾರೆಟ್ ವಜ್ರವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು. ಅದಲ್ಲದೆ, ಅವರು ಕಳೆದ ಎರಡು ವರ್ಷಗಳಲ್ಲಿ 2 ರಿಂದ 2.5 ಕ್ಯಾರೆಟ್ ತೂಕದ ಇತರ ನಾಲ್ಕು ಅಮೂಲ್ಯ ಕಲ್ಲುಗಳನ್ನು ಗಣಿಗಾರಿಕೆ ಮಾಡಿದ್ದಾರೆ.ಕಚ್ಚಾ ವಜ್ರವನ್ನು ಹರಾಜು ಹಾಕಲಾಗುವುದು ಮತ್ತು ಆದಾಯವನ್ನು ಸರ್ಕಾರಿ ರಾಯಧನ ಮತ್ತು ತೆರಿಗೆಗಳನ್ನು ಕಡಿತಗೊಳಿಸಿದ ನಂತರ ರೈತರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಖಾಸಗಿ ಅಂದಾಜಿನ ಪ್ರಕಾರ, 6.47 ಕ್ಯಾರೆಟ್ ವಜ್ರವು ಹರಾಜಿನಲ್ಲಿ ಸುಮಾರು ₹ 30 ಲಕ್ಷ ಪಡೆಯುವ ಸಾಧ್ಯತೆಯಿದೆ.ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ ವಜ್ರ ಸಂಗ್ರಹವಿದೆ ಎಂದು ಅಂದಾಜಿಸಲಾಗಿದೆ. 


ವಜ್ರಗಳನ್ನು ಗಣಿಗಾರಿಕೆ ಮಾಡಲು ಮತ್ತು ಜಿಲ್ಲಾ ಗಣಿಗಾರಿಕೆ ಅಧಿಕಾರಿಯ ಬಳಿ ಠೇವಣಿ ಇಡಲು ಸ್ಥಳೀಯ ರೈತರು ಮತ್ತು ಕಾರ್ಮಿಕರಿಗೆ ಪನ್ನಾ ವಜ್ರ ಮೀಸಲು ಪ್ರದೇಶದಲ್ಲಿ ರಾಜ್ಯ ಸರ್ಕಾರವು ಗುತ್ತಿಗೆ ಮೇಲೆ ಸಣ್ಣ ಭೂಮಿಯನ್ನು ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.