ಜೋಧಪುರ್: ಇಲ್ಲಿನ ಆಘಾತಕಾರಿ ಘಟನೆಯೊಂದರಲ್ಲಿ ದೇವರನ್ನು ಮೆಚ್ಚಿಸಲು ನಾಲ್ಕು ವರ್ಷ ವಯಸ್ಸಿನ ಮಗಳೊಬ್ಬನನ್ನು ಕೊಂದುಹಾಕಿದ್ದಕ್ಕಾಗಿ ಜೋಧಪುರ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಆರೋಪಿಯನ್ನು ನವಾಬ್ ಅಲಿ ಖುರೇಷಿ ಎಂದು ಗುರುತಿಸಿದ್ದು, ದೇವರನ್ನು ಮೆಚ್ಚಿಸಲು ಅರ್ಪಣೆಯಾಗಿ ತನ್ನ ಮಗಳ ಗಂಟಲು ಕೊಯ್ದು ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.



ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಬ್ ಇನ್ಸ್ಪೆಕ್ಟರ್ ರಾಜೇಶ್ ಖಾದವ್ "ದೇವರನ್ನು ಮೆಚ್ಚಿಸಲು ತನ್ನ ಮಗಳನ್ನು ತ್ಯಾಗ ಮಾಡಿದ್ದಾನೆಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವನಿಗೆ ದೆವ್ವವು ಕಾಡುತ್ತಿತ್ತು ಆದ್ದರಿಂದ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾರೆ.


ಈ ವಿಷಯವು ಪ್ರಮುಖವಾಗಿ  ಆ ಬಾಲಕಿಯ ತಾಯಿ ತನ್ನ ಮನೆಯಲ್ಲಿ ರಕ್ತ ಕಂಡು ಬಂದಾಗ ಇದು ತಿಳಿದುಬಂದಿದೆ. ಇಡೀ ಕುಟುಂಬವು ಟೆರೇಸ್ನಲ್ಲಿ ನಿದ್ದೆ ಮಾಡುತ್ತಿದ್ದಾಗ ಆರೋಪಿಯು ತನ್ನ ಮಗಳನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.