ನವದೆಹಲಿ: ಮುಂಬಯಿಯ ಆರೆ ಕಾಲೋನಿಯಲ್ಲಿ ವಿವಾದಾತ್ಮಕ ಮೆಟ್ರೋ ಕಾರ್ ಶೆಡ್ ಯೋಜನೆಯನ್ನು ಮುಂದುವರಿಯಲಿದೆ, ಆದರೆ ಮರ ಕಡಿಯುವಿಕೆಯ ಸ್ಥಗಿತವಾಗಿರಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ. ನ್ಯಾಯಾಲಯವು ಈ ವಿಷಯದ ಬಗ್ಗೆ ಶ್ವೇತಪತ್ರವನ್ನು ಕೇಳಿದೆ, ಮತ್ತು ಮರಗಳನ್ನು ಕಡಿದು, ಕಸಿ ಮಾಡಿದ ಮತ್ತು ಕಸಿ ಬದುಕುಳಿದ ಬಗ್ಗೆ ವಿವರಗಳನ್ನು ಕೋರಿತು.


COMMERCIAL BREAK
SCROLL TO CONTINUE READING

ಎರಡು ವರ್ಷಗಳ ಹಿಂದೆ ಕಾರ್ ಶೆಡ್ ಯೋಜನೆ ಘೋಷಣೆಯಾದಾಗಿನಿಂದ ವಿವಾದಕ್ಕೆ ಕಾರಣವಾಯಿತು. ಪರಿಸರವಾದಿಗಳು ಈ ಪ್ರದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮರಗಳು ಇವೆ ಮತ್ತು ವಿವಿಧ ರೀತಿಯ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಬುಡಕಟ್ಟು ಗ್ರಾಮಗಳಿವೆ ಎಂದು ಹೇಳಿ ಈ ಯೋಜನೆ ವಿರೋಧ ವ್ಯಕ್ತಪಡಿಸಿದ್ದರು.


ಅಕ್ಟೋಬರ್ 4 ರಂದು ಬಾಂಬೆ ಹೈಕೋರ್ಟ್ ಈ ಪ್ರದೇಶವನ್ನು ಅರಣ್ಯವೆಂದು ಘೋಷಿಸಲು ಕೋರಿ ಸಲ್ಲಿಸಿರುವ ನಾಲ್ಕು ಅರ್ಜಿಗಳನ್ನು ರದ್ದುಗೊಳಿಸಿತು. ಅದಾದ ಕೆಲವೇ ಗಂಟೆಗಳಲ್ಲಿ ಮರ ಕಡಿಯುವ ಕಾರ್ಯ ಪ್ರಾರಂಭವಾಯಿತು, ಇದಾದ ನಂತರ ಪರಿಸರ ಹೋರಾಟಗಾರರು ಹಾಗೂ ಮುಂಬೈ ಪೋಲೀಸರ ನಡುವೆ ಜಟಾಪಟಿ ನಡೆಯಿತು. ತದನಂತರ ಸುಮಾರು 29 ಜನರನ್ನು ಬಂಧಿಸಲಾಯಿತು.ನಂತರ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಂತರ ಮರಗಳ ಕಡಿಯುವಿಕೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ ಮುಂದಿನ ಆದೇಶದವರೆಗೆ ಮರಗಳನ್ನು ಕಡಿಯುವಂತಿಲ್ಲ ಎಂದು ಹೇಳಿತು. 


"ಕತ್ತರಿಸಬೇಕಾದದ್ದನ್ನು ಕತ್ತರಿಸಲಾಗಿದೆ. ಇನ್ನು ಮುಂದೆ ಮರಗಳನ್ನು ಕಡಿಯುವ ಅಗತ್ಯವಿಲ್ಲ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಹಾರಾಷ್ಟ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಆರೆ ಮರಗಳ ನಷ್ಟವನ್ನು ಸರಿದೂಗಿಸಲು 20,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿದೆ. ಇಂದಿನ ವಿಚಾರಣೆಯಲ್ಲಿ, ನವೆಂಬರ್ 15 ರಂದು ಮುಂದಿನ ವಿಚಾರಣೆಯವರೆಗೆ ಮರಗಳನ್ನು ಕಡಿಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.