ನವದೆಹಲಿ: ಮದುವೆ ಮಂಟಪದಲ್ಲೇ ವಧುವಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಆತಂಕಕಾರಿ ಘಟನೆ ನವದೆಹಲಿಯ ಶಕರ್ಪುರ್ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ. 


COMMERCIAL BREAK
SCROLL TO CONTINUE READING

ಮದುವೆ ಸಮಾರಂಭದಲ್ಲಿ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ 19 ವರ್ಷದ ವಧು ಪೂಜಾ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಆದರೆ, ಅದೃಷ್ಟವಶಾತ್ ಗುಂಡು ವಧುವಿನ ಕಾಲಿಗೆ ಬಿದ್ದಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 


ಗುಂಡು ತಗುಲಿ ರಕ್ತ ಸೋರುತ್ತಿದ್ದುದರಿಂದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆಕೆ ಸುಧಾರಿಸಿಕೊಂಡ ಬಳಿಕ ಮತ್ತೆ ಮದುವೆ ಮಂಟಪಕ್ಕೆ ಕರೆತಂದು ಮದುವೆ ಮುಂದುವರೆಸಲಾಯಿತು ಎನ್ನಲಾಗಿದೆ. 



"ಗುಂಡು ಹಾರಿಸಿದವರು ಯಾರು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಘಟನೆ ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಗಿ, ಕೂಡಲೇ ಅವರು ಮಂಟಪಕ್ಕೆ ಧಾವಿಸಿದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ" ಎಂದು ವಧು-ವರರು ಎಎನ್ಐಗೆ ತಿಳಿಸಿದ್ದಾರೆ.