ಬೆಂಗಳೂರು: ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ದೇವಾಲಯವು ಅಯೋಧ್ಯೆಯಲ್ಲಿ ಬಹುತೇಕ ಸಿದ್ಧವಾಗಿದೆ. ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೂ ನಡೆಯಲಿದೆ. ದೇಶದ ಮೂಲೆ ಮೂಲೆಯಿಂದ ರಾಮಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಕರ್ನಾಟಕದ ಆಧುನಿಕ ಗಾಂಧಿ ಎಂದೇ ಖ್ಯಾತರಾದ ಮುತ್ತಣ್ಣ ತಿರ್ಲಾಪುರ ಕರ್ನಾಟಕದಿಂದ ಅಯೋಧ್ಯೆಗೆ ಸುಮಾರು ಎರಡು ಸಾವಿರ ಕಿಲೋಮೀಟರ್ ವರೆಗೆ ಪಾದಯಾತ್ರೆ ಮೂಲಕ ಸಾಗಿದ್ದಾರೆ. 9 ಡಿಸೆಂಬರ್ 2023 ರಂದು ಕರ್ನಾಟಕದಿಂದ ಕಾಲ್ನಡಿಗೆಯಲ್ಲಿ ಹೊರಟ ಇವರು ಇದೀಗ ಪ್ರಯಾಗರಾಜ್ ತಲುಪಿದ್ದಾರೆ.


COMMERCIAL BREAK
SCROLL TO CONTINUE READING

ಭಗವಾನ್ ರಾಮನು ನಮಗೆಲ್ಲರಿಗೂ ಸತ್ಯದ ಮಾರ್ಗವನ್ನು ಅನುಸರಿಸಲು ಕಲಿಸಿದನು. ಮಹಾತ್ಮ ಗಾಂಧಿಯವರು ಕೂಡ ರಾಮನ ಭಕ್ತರಾಗಿದ್ದರು. ಅವರು ರಾಮನ ಹೆಸರನ್ನು ಜಪಿಸುತ್ತಿದ್ದರು. ಕೊನೆಯುಸಿರೆಳೆಯುವ ವರೆಗೂ ಮಹಾತ್ಮ ಗಾಂಧಿಯವರು ಭಗವಾನ್ ರಾಮನನ್ನು ಜಪಿಸಿದರು ಎಂದು ಆಧುನಿಕ ಗಾಂಧಿ ಮುತ್ತಣ್ಣ ತಿರ್ಲಾಪುರ ಹೇಳಿದರು. 


ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗುವ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಖರ್ಗೆ 


ಭಾನುವಾರ ಪ್ರಯಾಗರಾಜ್‌ನ ಮಾಘಮೇಳ ತಲುಪಿದ ಆಧುನಿಕ ಗಾಂಧಿ, ಸಂಗಮ್ ಪ್ರದೇಶಕ್ಕೆ ಭೇಟಿ ನೀಡಿ ಅಯೋಧ್ಯೆಗೆ ಬರುವಂತೆ ಜನರನ್ನು ಆಹ್ವಾನಿಸಿದರು. ಬಳಿಕ ಅಯೋಧ್ಯೆಯತ್ತ ಸಾಗಿದರು. ಆಧುನಿಕ ಗಾಂಧಿ ಮಂಗಳವಾರ ಅಯೋಧ್ಯೆಗೆ ತಲುಪಲಿದ್ದಾರೆ. ಅಯೋಧ್ಯೆಯಲ್ಲಿಯೂ ಸಹ, ಅವರು ಭಗವಾನ್ ರಾಮನ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಲಿದ್ದಾರೆ. 


ಜನವರಿ 17 ರಿಂದ ರಾಮಲಲ್ಲಾ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಜನವರಿ 17 ರಂದು ರಾಮಲಲ್ಲಾ ಮೂರ್ತಿಯ ಭವ್ಯ ಮೆರವಣಿಗೆಯನ್ನು ಮಾಡಲಾಗುವುದು. ಇದಾದ ಬಳಿಕ ಜನವರಿ 18ರಿಂದ ಪೂಜಾ ವಿಧಿ ವಿಧಾನಗಳು ಆರಂಭವಾಗಲಿವೆ. ಜನವರಿ 22 ರಂದು ಮೃಗಶಿರಾ ನಕ್ಷತ್ರದಲ್ಲಿ ಮಧ್ಯಾಹ್ನ 12:20 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ರಾಮಲಲ್ಲಾ ಅವರ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. 12:30 ಕ್ಕೆ ಪ್ರಧಾನಿ ಮೋದಿ ಅವರು ರಾಮಲಲ್ಲಾ ಅವರಿಗೆ ಮೊದಲ ಆರತಿಯನ್ನು ಮಾಡಲಿದ್ದಾರೆ.


ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಮಂತ್ರಿಸಲ್ಪಟ್ಟ ವಿಐಪಿಗಳು ಯಾರ್ಯಾರು ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.