ನವದೆಹಲಿ : ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸತಿ ಶಿಕ್ಷಣವನ್ನು ನೀಡುವ ಸಲುವಾಗಿ, ಕೇಂದ್ರ ಸರ್ಕಾರ ಸೋಮವಾರ (ಡಿಸೆಂಬರ್ 6) ಅವರ ಸಾಮಾಜಿಕ-ಆರ್ಥಿಕ ಉನ್ನತಿ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ 'ಶ್ರೇಷ್ಠ ಯೋಜನೆ' ಪ್ರಾರಂಭಿಸಲಿದೆ.


COMMERCIAL BREAK
SCROLL TO CONTINUE READING

'ಶ್ರೇಷ್ಠ ಯೋಜನೆ' ಶೀಘ್ರದಲ್ಲೇ ಆರಂಭ


ವಸತಿ ಶಿಕ್ಷಣ (ಶ್ರೇಷ್ಠ) ಯೋಜನೆಯಡಿ(Shreshtha Yojana) ಉದ್ದೇಶಿತ ಪ್ರದೇಶಗಳ ಪರಿಶಿಷ್ಟ ಜಾತಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ ಅನುವು ಮಾಡಿಕೊಡಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಗುರುವಾರ ಹೇಳಿದರು. ಇದು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಡ್ರಾಪ್ ಔಟ್ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Omicron Variant ನ ಮೂರು ಮುಖ್ಯ ಲಕ್ಷಣಗಳು ಇವು, ಮೊದಲಿಗಿಂತ ಸಂಪೂರ್ಣ ಭಿನ್ನ


ಡಿಸೆಂಬರ್ 6 ರಂದು 'ಮಹಾಪರಿನಿರ್ವಾಣ ದಿನ'


‘ಆಜಾದಿ ಕಾ ಅಮೃತ ಮಹೋತ್ಸವ’(Azadi Ka Amrut Mahotsav)ದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್() ಅವರ ಸ್ಮರಣಾರ್ಥ ಡಿ.6ರಂದು ಮಹಾಪರಿನಿರ್ವಾಣ ದಿನವನ್ನು ಆಚರಿಸಲು ಸರ್ಕಾರ ಸಜ್ಜಾಗಿದೆ ಎಂದರು.


ಮಹಾಪರಿನಿರ್ವಾಣ ದಿನದಂದು ಸಂಸತ್ತಿನಲ್ಲಿ ಕಾರ್ಯಕ್ರಮ


ಸಂಸತ್ ಭವನದಲ್ಲಿ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾಷ್ಟ್ರಪತಿ ಹಾಗೂ ಪ್ರಧಾನಿ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದರು. ಇದರ ನಂತರ ಬೌದ್ಧ ಸನ್ಯಾಸಿಗಳು ಧಮ್ಮವನ್ನು ಪಠಿಸುತ್ತಾರೆ. ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಾಡುಗಳು ಮತ್ತು ನಾಟಕ ವಿಭಾಗವು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅರ್ಪಿಸಿದ ವಿಶೇಷ ಗೀತೆಗಳನ್ನು ಸಂಸತ್ತಿನಲ್ಲಿ ಪ್ರಸ್ತುತಪಡಿಸುತ್ತದೆ.


ಇದನ್ನೂ ಓದಿ : ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತವಾಗಿ ಸಿಗಲಿದೆ 5 ಲಕ್ಷ ರೂ. ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.