ನವದೆಹಲಿ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ತ್ರಿಪುರದ ಬಾದರ್‌ಘಾಟ್ ಮತ್ತು ಉತ್ತರ ಪ್ರದೇಶದ ಹಮೀರ್‌ಪುರದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ.


COMMERCIAL BREAK
SCROLL TO CONTINUE READING

"ಬಿಜೆಪಿ 4 ಇಂಡಿಯಾ(@BJP4India)ದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ತ್ರಿಪುರದ ಬಾದರ್‌ಘಾಟ್‌ ಮತ್ತು ಉತ್ತರಪ್ರದೇಶದ ಹಮೀರ್‌ಪುರದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಕನಸುಗಳನ್ನು ಈಡೇರಿಸುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ. ಆಯಾ ರಾಜ್ಯ ಘಟಕಗಳಿಗೆ ಮತ್ತು ಜನರಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ, "ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.



ಬಿಜೆಪಿಯ ಮಿಮಿ ಮಜುಂದಾರ್ ಅವರು ಬಾದರ್‌ಘಾಟ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 20,487 ಮತಗಳಿಂದ ಗೆದ್ದಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ಬುಲ್ಟಿ ಬಿಸ್ವಾಸ್ ಅವರು 15,211 ಮತಗಳನ್ನು ಗಳಿಸಿದ್ದಾರೆ.


ಹಮೀರ್‌ಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಯುವರಾಜ್ ಸಿಂಗ್ 74,500 ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿ 57,300 ಮತಗಳನ್ನು ಪಡೆದರು.