ಮಧ್ಯಪ್ರದೇಶ: ನಾಗರಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ರೀತಿಯ ದೂರುಗಳೊಂದಿಗೆ ಜನರು ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸುತ್ತಾರೆ. ಆದರೆ, ಮಧ್ಯಪ್ರದೇಶದ ಉಜ್ಜಯಿನಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ವಿಲಕ್ಷಣ ದೂರಿನ ಮೂಲಕ ಗೃಹ ಸಚಿವರು ಮತ್ತು ಸಂಬಂಧಪಟ್ಟ ಅಬಕಾರಿ ಇಲಾಖೆಯ ಬಾಗಿಲು ತಟ್ಟಿದ್ದಾನೆ.


COMMERCIAL BREAK
SCROLL TO CONTINUE READING

ಲೋಕೇಂದ್ರ ಸೇಥಿಯಾ ಎಂದು ಗುರುತಿಸಲಾಗಿರುವ ದೂರುದಾರ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರಿಗೆ ಲಿಖಿತ ದೂರನ್ನು ಕಳುಹಿಸಿದ್ದಾರೆ ಮತ್ತು ಅವರು ಖರೀದಿಸಿದ ಶಂಕಿತ ನಕಲಿ ಮದ್ಯದ ವಿರುದ್ಧ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನೂ ನೀಡಿದ್ದಾರೆ.


ಇದನ್ನೂ ಓದಿ: Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಈ ತಿಂಗಳು 11 ದಿನ ಬ್ಯಾಂಕ್ ಬಂದ್


ಸೇಥಿಯಾ ಸ್ಥಳೀಯ ನಿರ್ಮಿತ (ದೇಸಿ) ಮದ್ಯದ ನಾಲ್ಕು ಕ್ವಾರ್ಟರ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅವುಗಳಲ್ಲಿ ಎರಡು ಬಾಟಲಿಗಳನ್ನು ಸೇವಿಸಿದರೂ, ನಶೆಯಾಗಿಲ್ಲ ಎಂದು ದೂರಿದ್ದಾರೆ. ಅವರು ಖರೀದಿಸಿದ ಮದ್ಯ ನಕಲಿ ಅಥವಾ ಕಲಬೆರಕೆ ಎಂದು ಶಂಕಿಸಿ, ಅವರು ಗೃಹ ಸಚಿವರು ಮತ್ತು ಅಬಕಾರಿ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಅವರು ತಮ್ಮ ದೂರಿನ ಜೊತೆಗೆ ಮದ್ಯದ ಉಳಿದ ಬಾಟಲಿಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದ್ದಾರೆ.


ಕಳೆದ ಏಪ್ರಿಲ್ 12 ರಂದು ಉಜ್ಜಯಿನಿಯ ಕ್ಷೀರಸಾಗರ ಪ್ರದೇಶದ ಅಂಗಡಿಯೊಂದರಿಂದ ತನ್ನ ಸ್ನೇಹಿತನೊಂದಿಗೆ ಸ್ಥಳೀಯವಾಗಿ ತಯಾರಿಸಿದ ಮದ್ಯದ ಅಂಗಡಿಯ ನಾಲ್ಕು ಕ್ವಾರ್ಟರ್ ಅನ್ನು ಖರೀದಿಸಿದ್ದಾಗಿ ಸೇಥಿಯಾ ದೂರಿನಲ್ಲಿ ತಿಳಿಸಿದ್ದಾರೆ.  


ಈ ಪತ್ರ ಬರೆಯುವುದಕ್ಕೂ ಮೊದಲು ಸೇಥಿಯಾ ನೇರವಾಗಿ ಅಬಕಾರಿ ಪೊಲೀಸ್ ಠಾಣೆಗೆ ತೆರಳಿ ಬಾಟಲ್‌ಗಳಲ್ಲಿ ನೀರು ಇದೆ ಎಂದು ಆರೋಪಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರು ಉಳಿದ ಎರಡು ಮದ್ಯದ ಬಾಟಲಿಗಳನ್ನು ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅವರು ವಿಷಯವನ್ನು ಪರಿಶೀಲಿಸಬೇಕು ಮತ್ತು ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 


ಇದನ್ನೂ ಓದಿ: Walking Tips : ಮುಂಜಾನೆ ವಾಕಿಂಗ್ ನಂತರ ಮಾಡದಿರಿ ಈ ತಪ್ಪುಗಳನ್ನು!


ಈ ಬಗ್ಗೆ ಪರಿಶೀಲಿಸುವುದಾಗಿ ಅಬಕಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಮಧ್ಯೆ, ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕರ ವೇದಿಕೆಗೆ ತೆರಳುವುದಾಗಿ ಸೇಥಿಯಾ ಅಬಕಾರಿ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೆ, ಮೇ 6 ರವರೆಗೆ ಅವರ ದೂರಿನ ಬಗ್ಗೆ ಯಾವುದೇ ತನಿಖೆ ನಡೆಸದ ಕಾರಣ, ಸೇಥಿಯಾ ಇದೀಗ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಗ್ರಾಹಕ ವೇದಿಕೆಯ ಕದತಟ್ಟುವುದಾಗಿಯೂ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.