ಬೆಂಗಳೂರು : ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು “ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ -2022” ಅರ್ಜಿ ಆಹ್ವಾನಿಸಿದೆ.


COMMERCIAL BREAK
SCROLL TO CONTINUE READING

ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (ಟಿ.ವಿ), ವಿದ್ಯುನ್ಮಾನ ಮಾಧ್ಯಮ (ರೇಡಿಯೋ) ಹಾಗೂ ಆನ್‍ಲೈನ್ (ಇಂಟರ್‍ನೆಟ್) / ಸಾಮಾಜಿಕ ಜಾಲತಾಣ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2022ರ ಸಾಲಿನಲ್ಲಿ ಮತದಾರರ ಜಾಗೃತಿ ಕುರಿತು ಪ್ರಕಟಿಸಿದ ಲೇಖನಗಳನ್ನು ಅಥವಾ ಪ್ರಸಾರ ಮಾಡಿದ ಸುದ್ದಿಗಳನ್ನು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬಹುದಾಗಿದೆ.ಉಕ್ರೇನ್ ತೊರೆಯಲು ಭಾರತೀಯ ಪ್ರಜೆಗಳಿಗೆ ಸೂಚನೆ


ಮುದ್ರಣ ಮಾಧ್ಯಮದ ಸಂಸ್ಥೆಗಳು ತಮ್ಮ ಸುದ್ದಿಯ ತುಣುಕುಗಳನ್ನು ಪ್ರಕಟಿಸಿದ ದಿನಾಂಕ ಸೇರಿದಂತೆ ಮುದ್ರಣ ಮಾಡಿದ ಸುದ್ದಿ / ಲೇಖನಗಳು ಹಾಗೂ ಪ್ರಕಟವಾಗಿರುವ ಸುದ್ದಿಯ ಅಳತೆಯನ್ನು ಪಿಡಿಎಫ್ ಸಾಫ್ಟ್ ಕಾಪಿ / ಸಂಬಂಧಿಸಿದ ಜಾಲತಾಣದ ವಿಳಾಸ / ಪೂರ್ಣ ಅಳತೆಯ ವೃತ್ತಪತ್ರಿಕೆ ಛಾಯಾಪ್ರತಿ / ಲೇಖನಗಳನ್ನು, ನೇರ ಸಾರ್ವಜನಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಹ ಇತರೆ ಯಾವುದೇ ವಿವರಗಳನ್ನು ಸಲ್ಲಿಸುವುದು.


ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳು (ಎಲೆಕ್ಟ್ರಾನಿಕ್) ಮತ್ತು ರೇಡಿಯೋ (ಎಲೆಕ್ಟ್ರಾನಿಕ್) ಸಂಬಂಧಿತ ಅವಧಿಯಲ್ಲಿ ನಡೆಸಿದ ಪ್ರಚಾರ / ಕೆಲಸದ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು, ಪ್ರಸಾರದ ಅವಧಿ ಮತ್ತು / ಟೆಲಿಕಾಸ್ಟ್ ಕಾರ್ಯಕ್ರಮವನ್ನು ಸಿಡಿ ಅಥವಾ ಡಿವಿಡಿ ಅಥವಾ ಪೆನ್ ಡ್ರೈವ್‍ನಲ್ಲಿ ಮತದಾರರ ಜಾಗೃತಿ ಕುರಿತು ಸುದ್ದಿ ವೈಶಿಷ್ಟ್ಯಗಳು ಮತ್ತು ಆ ಅವಧಿಯಲ್ಲಿ ಪ್ರಸಾರವಾದ ಪ್ರತಿ ಸ್ಥಳದ ಒಟ್ಟು ಸಮಯ, ಹಾಗೂ ಪ್ರಸಾರ ಸಮಯದ ಮೊತ್ತ ಸಲ್ಲಿಸುವುದು. ಆನ್‍ಲೈನ್ (ಇಂಟರ್‍ನೆಟ್) / ಸಾಮಾಜಿಕ ಮಾಧ್ಯಮಗಳು ಪ್ರಸಾರದ ಯಾವುದೇ ಕೆಲಸದ ಸಾರಾಂಶವನ್ನು ಒಳಗೊಂಡಿರುವಂತರಹ ಪೋಸ್ಟ್‍ಗಳ ಸಂಖ್ಯೆ / ಬ್ಲಾಗ್‍ಗಳು/ ಅಭಿಯಾನಗಳು/ ಟ್ವಿಟ್‍ಗಳು / ಲೇಖನಗಳು ಇತ್ಯಾದಿಗಳನ್ನು ಸಾಫ್ಟ್ ಕಾಪಿ ಅಥವಾ ಸಂಬಂಧಿತ ವೆಬ್ ವಿಳಾಸಕ್ಕೆ ಲಿಂಕ್‍ನೊಂದಿಗೆ ಸಲ್ಲಿಸುವುದು.


ಇದನ್ನೂ ಓದಿ: ಶ್ರೀಲಂಕಾದ ಲೇಖಕ ಶೆಹನ್ ಕರುಣಾತಿಲಕ ಅವರಿಗೆ 2022 ರ ಬೂಕರ್ ಪ್ರಶಸ್ತಿ


ಇಂಗ್ಲಿಶ್ /ಹಿಂದಿ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಸಲ್ಲಿಸಲಾಗುವ ಅರ್ಜಿಗಳ ಜೊತೆಗೆ ಇಂಗ್ಲಿಶ್ ಅನುವಾದದ ಪ್ರತಿಯೊಂದಿಗೆ ಸಲ್ಲಿಸುವುದು. ವಿಫಲವಾದರೆ ನಿರಾಕರಣೆಗೆ ಒಳಪಟ್ಟಿರುತ್ತದೆ. ಪ್ರಸಾರದ ವಿಷಯವನ್ನು ಸಲ್ಲಿಸುವ ಪ್ರವೇಶದಾರರು ಜ್ಯೂರಿ ವೈಶಿಷ್ಟ್ಯಗಳು / ಕಾರ್ಯಕ್ರಮದ ಮೊದಲ ಹತ್ತು ನಿಮಿಷಗಳನ್ನು ಮಾತ್ರ ಬಳಸಬಹುದಾಗಿರುತ್ತದೆ.


ಆಯೋಗದ ತೀರ್ಮಾನವು ಅಂತಿಮವಾಗಿದ್ದು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವು ಎಲ್ಲಾ ಹಕ್ಕುಗಳನ್ನು ಹೊಂದಿದೆ. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆಗಳು ಮತ್ತು ಇ-ಮೇಲ್ ಅನ್ನು ಸ್ಪಷ್ಟವಾಗಿ ನಮೂದಿಸಿರಬೇಕು.


ಅರ್ಜಿಗಳನ್ನು 30 ನೇ ನವೆಂಬರ್ 2022ರ ಒಳಗಾಗಿ, ನೇರವಾಗಿ ಶ್ರೀ ಲವಕುಶ್ ಯಾದವ್, ಅಧೀನ ಕಾರ್ಯದರ್ಶಿ (ಸಂವಹನ) ಭಾರತದ ಚುನಾವಣಾ ಆಯೋಗ, ನಿರ್ವಚನ ಸದನ, ಅಶೋಕ ರಸ್ತೆ, ನವದೆಹಲಿ 110001. ಹಾಗೂ ಇಮೇಲ್: division@eci.gov.in Ph. No: 011-23052033 ಸಲ್ಲಿಸುವುದು.


ಇದನ್ನೂ ಓದಿ: ಮುರುಘಾಮಠದಲ್ಲಿ ಬಿಎಸ್​ವೈ, ಶಾಮನೂರು ದುಡ್ಡಿದೆಯಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ