ಲಖನೌ: ಮುಂದಿನ ಮೂರು ವರ್ಷಗಳಲ್ಲಿ ನಕ್ಸಲವಾದ ಸಂಪೂರ್ಣವಾಗಿ ದೇಶದಿಂದ ನಿರ್ನಾಮಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಸಿಆರ್ಪಿಎಫ್ ನ ವಿಶೇಷ ವಿಭಾಗವಾದ ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ನ 26 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ  ರಾಜನಾಥ್ ಸಿಂಗ್ "ದೇಶದಿಂದ ನಕ್ಸಲವಾದ ನಿರ್ನಾಮವಾಗುವ ದಿನಗಳು ಬಹಳ ದೂರಿಲ್ಲ 1-2 ಅಥವಾ ಮೂರು ವರ್ಷಗಳಲ್ಲಿ ಅದು ದೇಶದಿಂದ ನಿರ್ನಾಮವಾಗಲಿದೆ.ಅದು ನಿಮ್ಮ (ಸಿಆರ್ಪಿಎಫ್) ನಿರ್ಣಯ, ಧೈರ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ ಸಂಭವಿಸುತ್ತದೆ" ಎಂದು ಹೇಳಿದರು.


ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಕ್ಸಲ್ ಹಿಂಸಾಚಾರ ಜಿಲ್ಲೆಗಳು 10-12 ಕ್ಕೆ ಕುಸಿದಿವೆ.ಈ ವರ್ಷ 131 ಮಾವೋವಾದಿಗಳು ಮತ್ತು ಭಯೋತ್ಪಾದಕರನ್ನು ಈ ವರ್ಷ ಕೊಲ್ಲಲಾಗಿದೆ. ಅವುಗಳಲ್ಲಿ 1,278 ಜನರನ್ನು ಬಂಧಿಸಲಾಗಿದೆ. ಇದೇ ವೇಳೆ 58 ನಕ್ಸಲರು ಶರಣಾಗತರಾಗಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.