ಅಹಮದಾಬಾದ್​: ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​ ಅವರಿಗೆ ಹಣಕಾಸು ಖಾತೆಯನ್ನು ಮರಳಿ ನೀಡುವ ಮೂಲಕ ಗುಜರಾತ್​ ಬಿಜೆಪಿಯಲ್ಲಿ ಎದ್ದಿದ್ದ ಭಿನ್ನಮತವನ್ನು ಅಮಿತ ಷಾ ಶಮನಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಡಿ.28 ರಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ನಿತಿನ್​ ಪಟೇಲ್​ ಕಚೇರಿಗೆ ಆಗಮಿಸಿರಲಿಲ್ಲ. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಪಟೇಲ್​ಗೆ ಕರೆ ಮಾಡಿದ ಅಮಿತ್​ ಷಾ, ಹಣಕಾಸು ಖಾತೆಯನ್ನು ಮರಳಿಸುವುದಾಗಿ ಅವರಿಗೆ ಭರವಸೆ ನೀಡಿದ ಮೇಲೆ ಉದ್ಭವಗೊಂಡಿದ್ದ ಭಿನ್ನಮತ ಶಮನಗೊಂಡಿದೆ.


ಇದಕ್ಕೂ ಮೊದಲು ಈ ಖಾತೆಯನ್ನು ಸೌರಭ್​ ಪಟೇಲ್​ ಅವರಿಗೆ ನೀಡಲಾಗಿತ್ತು. ಮುಖ್ಯ ಮಂತ್ರಿ ವಿಜಯ್​ ರೂಪಾಣಿ ಈಗಾಗಲೇ ಖಾತೆಯ ಬದಲಾವಣೆಯ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದಾರೆ. ನಿತಿನ್​ ಪಟೇಲ್​ ಕೂಡ ತಮ್ಮ ಇಷ್ಟದ ಖಾತೆ ದೊರೆತಿರುವುದರಿಂದ ಬಂಡಾಯದ ಬಾವುಟವನ್ನು ಇಳಿಸಿದ್ದಾರೆ.