ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಫರ್ವೇಜ್ ಮುಷರಫ್ ಪಾಕಿಸ್ತಾನಕ್ಕಿಂತ ಭಾರತ ಹೆಚ್ಚು ಶಕ್ತಿಯುತವಾಗಿದೆ ಎಂಬುದನ್ನು ನಿರಾಕರಿಸಿದ್ದಾರೆ. ಭಾನುವಾರ ಅಬುದಾಬಿಯಲ್ಲಿ ಮಾತನಾಡಿದ ಅವರು ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ಮಾಡುವ ವಿಷಯವನ್ನು ತಿರಸ್ಕರಿಸಿದರು. ಪಾಕ್ ಭಾರತದ ಮೇಲೆ ಒಂದು ಪರಮಾಣು ದಾಳಿ ನಡೆಸಿದ್ದೇ ಆದರೆ, ಪ್ರತಿಯಾಗಿ ಭಾರತ 20 ಪರಮಾಣು ದಾಳಿ ನಡೆಸಿ ಪಾಕಿಸ್ತಾನವನ್ನು ನಾಶಪಡಿಸಲಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ಪಾಕಿಸ್ತಾನದ ಮೇಲೆ 20 ಪರಮಾಣು ಬಾಂಬ್ ದಾಳಿ ನಡೆಸುವುದಿಲ್ಲ:
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತೊಮ್ಮೆ ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದು ಪರ್ವೇಜ್ ಮುಷರಫ್ ಹೇಳಿದ್ದಾರೆ. ಭಾರತದ 20 ಪರಮಾಣು ಬಾಂಬ್ ದಾಳಿಗಳಿಂದ ಪಾಕಿಸ್ತಾನವನ್ನು ರಕ್ಷಿಸಬಯಸುವುದಾದರೆ, ಮೊದಲಿದೆ ಪಾಕಿಸ್ತಾನ ಭಾರತದ ಮೇಲೆ 50 ಪರಮಾಣು ಬಾಂಬ್ ದಾಳಿ ನಡೆಸಬೇಕು. ಭಾರತ ಪಾಕಿಸ್ತಾನದ ಮೇಲೆ 20 ಪರಮಾಣು ಬಾಂಬ್ ದಾಳಿ ನಡೆಸುವುದಿಲ್ಲ. ನೀವು ಭಾರತದ ಮೇಲೆ 50 ಪರಮಾಣು ಬಾಂಬ್ ದಾಳಿ ನಡೆಸಲು ಸಿದ್ದರಿದ್ದೀರಾ? ಎಂದು ಅವರು ಪಾಕಿಸ್ತಾನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.


ಈ ಮೊದಲು(ಫೆ.20) ಖಾಸಗಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಭಾರತದ 40 ಸಿಆರ್​ಪಿಎಫ್ ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ಉಗ್ರ ದಾಳಿಯನ್ನು ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ನಡೆಸಿರುವುದನ್ನು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಫರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. ಇದೊಂದು ಭಯಾನಕ ಘಟನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 'ಜೈಶ್ ಪಡೆಗಳು ನನ್ನ ಮೇಲೆಯೂ ದಾಳಿ ನಡೆಸಿದ್ದವು ಎಂದು ತಿಳಿಸಿದ ಮುಷರಫ್ ಈಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಸಹ ಜೈಶ್ ಕುರಿತಾಗಿ ಮೃದು ಧೋರಣೆ ಹೊಂದಿದ್ದಾರೆ ಎಂದು ನನಗನಿಸುವುದಿಲ್ಲ’ ಎಂದಿದ್ದರು.


ಆದಾಗ್ಯೂ, ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಅವರು ದೃಢವಾಗಿ ಸಮರ್ಥಿಸಿಕೊಂಡಿದ್ದರಲ್ಲದೆ, ಮೌಲಾನ ಮಸೂದ್ ಈ ದಾಳಿಯನ್ನು ನಡೆಸಿದ್ದು, ಈ ವಿಷಯದಲ್ಲಿ ಪಾಕಿಸ್ತಾನ ಸರ್ಕಾರವನ್ನು ದೂಷಿಸಬೇಡಿ ಎಂದು ಹೇಳುವ ಮೂಲಕ ಪಾಕಿಸ್ತಾನ ಸರ್ಕಾರದ ಪರವಾಗಿ ಮಾತನಾಡಿದ್ದರು. ಈ ದಾಳಿ ಕುರಿತಂತೆ ಜಂಟಿ ತನಿಖಾ ತಂಡ ರಚಿಸಿ, ತನಿಖೆ ನಡೆಸಬೇಕು ಎಂದು ಅವರು  ಆಗ್ರಹಿಸಿದ್ದರು.