ನವದೆಹಲಿ: ಅಹ್ಮದಾಬಾದ್ ನಲ್ಲಿ ರ್ಯಾಲಿಯೊಂದರಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯನ್ನು ಪಂಜಾಬ್ ಸಚಿವ ನವಜೋತ್ ಸಿಧು ಭಾಷಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಸಿಧು " ಅರೇ ನರೇಂದ್ರ ಮೋದಿ ಜಿ ಹೊಟ್ಟೆ ಖಾಲಿ ಇದೆ ಯೋಗ ಮಾಡಲಿಕ್ಕೆ ಹೊರಟಿದ್ದೀರಿ ಎಲ್ಲರನ್ನು ಬಾಬಾ ರಾಮ್ ದೇವ್ ಮಾಡಿರಿ.ಜೇಬು ಖಾಲಿ ಇದೆ ಖಾತೆ ತೆರೆಯಲು ಹೊರಟಿದ್ದಿರಿ, ಇದೆಂತಹ ರಾಷ್ಟ್ರಭಕ್ತಿ ? ಮೋದಿಜಿ ನಿಮ್ಮದು ಎಂದು "ವ್ಯಂಗ್ಯವಾಡಿದ್ದಾರೆ.



ಎಎನ್ಐ ಶೇರ್ ಮಾಡಿರುವ ಈ ವೀಡಿಯೋದಲ್ಲಿ ವಿಶೇಷವೆಂದರೆ ಅವರು ಬಾಬಾ ರಾಮ್ ದೇವ್ ಅವ್ರ ಯೋಗಾಸನಗಳನ್ನು ಮಾಡಿ ತೋರಿಸುತ್ತಾ ವ್ಯಂಗ್ಯವಾಡಿರುವುದು.ಇದಕ್ಕೂ ಮೊದಲು ಬಿಹಾರದ ಕಟಿಯಾರ್ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿಯೊಂದರಲ್ಲಿ ಭಾಗವಹಿಸಿ ಭಾಷಣ ಮಾಡುತ್ತಾ ಬಿಜೆಪಿ ಸರ್ಕಾರ ವಿಭಜಕ ಪ್ರಚಾರ ನೀತಿಯನ್ನು ಅನುಸರಿಸುತ್ತದೆ ಎಂದು ಸಿಧು ಆರೋಪಿಸಿದ್ದರು.


ಇನ್ನು ಮುಂದುವರೆದು ಮುಸ್ಲಿಂ ಮತದಾರರಿಗೆ ಮತ ವಿಭಜನೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು.ಇದಾದ ನಂತರ ಕಟಿಯಾರ್ ಜಿಲ್ಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.