ನವದೆಹಲಿ: PM Modi Address To Nation - ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಎರಡು ಬಹುದೊಡ್ಡ ಘೋಷಣೆಗಳನ್ನೂ ಮಾಡಿದ್ದಾರೆ. ತಮ್ಮ ಮೊದಲ ಪ್ರಮುಖ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ ಸರ್ಕಾರ ದೇಶದ 18+ ವಯಸ್ಸಿನ ದೇಶದ ಪ್ರತಿ ವ್ಯಕ್ತಿಗೂ ಕೂಡ ಉಚಿತ ವ್ಯಾಕ್ಸಿನ್ (Free Vaccine To All 18 Plus) ಪೂರೈಸಲಿದ್ದು, ವ್ಯಾಕ್ಸಿನ್ ನಿರ್ವಹಣೆಯಲ್ಲಿ ರಾಜ್ಯಸರ್ಕಾರಗಳ ಮೇಲಿದ್ದ ಶೇ.25ರಷ್ಟು ಹೊರೆಯನ್ನು ಕೂಡ ಕೇಂದ್ರವೇ ಹೊತ್ತುಕೊಳ್ಳಲಿದೆ' ಎಂದಿದ್ದಾರೆ. ವ್ಯಾಕ್ಸಿನೆಶನ್ ನ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ (Modi Government) ಹೊತ್ತುಕೊಳ್ಳಲಿದೆ. ಜನರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಇನ್ಮುಂದೆ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ವ್ಯಾಕ್ಸಿನ್ ಅನ್ನು ಖಾಸಗಿ ವ್ಯಾಕ್ಸಿನ್  ತಯಾರಕ ಕಂಪನಿಗಳಿಂದ ನೇರವಾಗಿ ಖರೀದಿಸಬಹುದು. ತಮ್ಮ ಎರಡನೇ ಪ್ರಮುಖ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'PM ಗರೀಬ್ ಕಲ್ಯಾಣ್ ಯೋಜನೆಯ' (PM Garib Kalyan Scheme) ಅಡಿ ದೇಶದ 80 ಕೋಟಿ ಲಾಭಾರ್ಥಿಗಳಿಗೆ ನವೆಂಬರ್ ವರೆಗೆ ಉಚಿತ ಕೇಂದ್ರ ಸರ್ಕಾರ ರೇಶನ್ ನೀಡಲಿದೆ'. 


Pune Fire Accident: SVS Aqua Technologies ಕಂಪನಿಯಲ್ಲಿ ಭೀಕರ ಅಗ್ನಿ ಅವಘಡ, 12 ಸಾವು ಮತ್ತು ಹಲವರು ನಾಪತ್ತೆ


COMMERCIAL BREAK
SCROLL TO CONTINUE READING

ಲಾಕ್ ಡೌನ್ ಕೊನೆಯ ಪರ್ಯಾಯ
'ಎರಡನೇ ಅಲೆಯ ನಡುವೆ ಈ ಮೊದಲು ಏಪ್ರಿಲ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಲಾಕ್ ಡೌನ್ (Lockdown) ಅನ್ನು ಕೊನೆಯ ಅಸ್ತ್ರವಾಗಿ ಬಳಸಲು ಹೇಳಿದ್ದರು. ಆದರೆ, ಸತತವಾಗಿ ಹೆಚ್ಚಾಗುತ್ತಿರುವ ಪ್ರಕರಣಗಳು ಹಾಗೂ ಆಕ್ಸಿಜನ್ ಕೊರತೆ, ICU ಬೆಡ್ ಗಳ ಕೊರತೆ ಇತ್ಯಾದಿಗಳ ಕಾರಣ ರಾಜ್ಯಗಳಿಗೆ ಸೆಮಿ ಲಾಕ್ ಡೌನ್ (Semi Lockdown) ಸಹಾಯ ಪಡೆಯಲೇ ಬೇಕಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.


ಇದನ್ನೂ ಓದಿ-PM Modi Morphed Photo ಹಂಚಿಕೊಂಡ ಪ್ರಸಾರ ಭಾರತಿ ಮಾಜಿ CEO, ಮುಂದೇನಾಯ್ತು ಗೊತ್ತಾ?


ಮೇ ತಿಂಗಳ ಕೊನೆಯ ದಿನಗಳಿಂದ ಪ್ರಕರಣಗಳಲ್ಲಿ ಇಳಿಮುಖ
'ಮೇ ತಿಂಗಳಾಂತ್ಯದಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯನ್ನು ಗಮನಿಸಲಾಗುತ್ತಿದೆ. ಇದೀಗ ಆಸ್ಪತ್ರೆಗಳಲ್ಲಿ ಮೊದಲಿನಂತೆ ಆಕ್ಸಿಜನ್ ಬೆಡ್ ಗಳಿಗಾಗಿ (Oxygen Bed)ಹಾಹಾಕಾರ ಕಂಡುಬರುತ್ತಿಲ್ಲ. ಇದಕ್ಕೂ ಮೊದಲು ದೇಶಾದ್ಯಂತ ನಿತ್ಯ 3 ರಿಂದ 4 ಲಕ್ಷ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ, ಇಂದು ಆ ಸಂಖ್ಯೆ ಒಂದು ಲಕ್ಷಕ್ಕೆ ಇಳಿಕೆಯಾಗಿದೆ. ಸೋಮವಾರ ಕೊರೊನಾ ವೈರಸ್(Coronavirus) ನ ಒಟ್ಟು 1,00,636 ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ದೇಶಾದ್ಯಂತ ಸುಮಾರು 2,89,09,975 ಜನರು ಈ ಸೋಂಕಿಗೆ ಗುರಿಯಾಗಿದ್ದಾರೆ.


ಇದನ್ನೂ ಓದಿ -'ಜನರ ಜೀವದ ಜತೆ ಚೆಲ್ಲಾಟ‌ ಬಿಡಿ, ಇಲ್ಲವೇ ಅಧಿಕಾರ ಬಿಟ್ಟು ಇಳಿಯಿರಿ ಕೆಳಗೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ