ಛಿಂದ್ವಾರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಾಂಗ್ರೆಸ್‌ ನಾಯಕ, ಸಂಸದ ಕಮಲ್‌ನಾಥ್‌ ಕಡೆ ಲೋಡೆಡ್‌ ಬಂದೂಕನ್ನು ಗುರಿಯಿಟ್ಟಿದ್ದ ಪೊಲೀಸ್‌ ಪೇದೆಯನ್ನು ಇಂದು ಪೊಲೀಸರು ಬಂಧಿಸಿದ್ದು, ದೂರು ದಾಖಲಿಸಲಾಗಿದೆ. 


COMMERCIAL BREAK
SCROLL TO CONTINUE READING

ವಿಚಾರಣೆ ವೇಳೆ ತನ್ನ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪೇದೆ, "ನಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ, ಬಂದುಕನ್ನು ಒಂದು ಭುಜದಿಂದ ಇನ್ನೊಂದು ಭುಜಕ್ಕೆ ಸ್ಥಳಾಂತರಿಸುತ್ತಿದ್ದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ'' ಎಂದು ಹೇಳಿದ್ದಾನೆ. 


ಬಂದೂಕನ್ನು ಒಂದು ಭುಜದಿಂದ ಮತ್ತೂಂದು ಭುಜಕ್ಕೆ ಬದಲಿಸುವಾಗ ಈ ರೀತಿ ಆಗಿದೆ' ಎಂದು ಪೇದೆ ಹೇಳಿದ್ದಾರೆ. ಸದ್ಯಕ್ಕೆ ಈ ಪೇದೆಯನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಲಾಗಿದ್ದು, ಪೇದೆಯ ಆರೋಗ್ಯ ಪರೀಕ್ಷೆ ಮತ್ತು ಹಿಂದಿನ ದಾಖಲೆಯನ್ನು ಪರಿಶೀಲಿಸಲಾಗುತ್ತಿದೆ. 


ಛೀದ್ವಾರದ ಡೆಪ್ಯುಟಿ ಡಿಐಜಿ ಜಿ.ಕೆ.ಪಾಂಡೆ ಮಾತನಾಡಿ, ಕಮಲ್ನಾಥ್ ಅವರು ಸಂಜೆ 4 ಗಂಟೆ ಸಮಯದಲ್ಲಿ ವಿಮಾನ ಹತ್ತಲು ಬರುತ್ತಿದ್ದ ಸಂದರ್ಭದಲ್ಲಿ ಪೇದೆ ಪವಾರ್ ತಕ್ಷಣವೇ ತನ್ನ ಐಎನ್ಎಸ್ಎಎಸ್ ರೈಫಲ್ ಅನ್ನು ತೋರಿಸಿದರು. ಆದರೆ ಅಲ್ಲಿನ ಇತರ ಭದ್ರತಾ ಸಿಬ್ಬಂದಿಗಳು ಅವರನ್ನು ತಕ್ಷಣವೇ ತಡೆದರು ಎಂದರು.