ಪುಣೆ: ಇಲ್ಲಿನ ಇಂದಾಪುರದಲ್ಲಿನ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.


COMMERCIAL BREAK
SCROLL TO CONTINUE READING

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣೆ ಪೊಲೀಸರ ಪ್ರಕಾರ, ಅಕ್ಟೋಬರ್ 9 ರಂದು ಕೈದಿ ಸಿದ್ಧಾರ್ಥ್ ಕಾಂಬ್ಳೆ ತನ್ನ ಒಳ ಉಡುಪಿನ ಬಟ್ಟೆಯನ್ನು ಬಳಸಿ ನೇಣು ಹಾಕಿಕೊಂದಿದ್ದಾನೆ ಎನ್ನಲಾಗಿದೆ.


ಮೃತ ಕ್ಯಾಂಬ್ಳೆ ಕೊಲೆ ಯತ್ನದ ಆರೋಪಿಯಾಗಿದ್ದು, ಇತ್ತೀಚೆಗೆ ಸೆಷನ್ ನ್ಯಾಯಾಲಯ ಆತನಿಗೆ ಜಾಮೀನು ನಿರಾಕರಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 8 ರಂದು ಅರ್ಜುನ್ ಮಹಾದೇವ್ ನಿಸರೇಡೆ ಎಂಬ ಮತ್ತೋರ್ವ ಆರೋಪಿ ಆಕಸ್ಮಿಕವಾಗಿ ನೀರಿ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿದ್ದ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಯೆರ್ವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.