ಮುಂಬೈ: ಇತ್ತೀಚೆಗೆ ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಪ್ರಧಾನಿ ಮೋದಿ ವಿರುದ್ಧದ ಹೇಳಿಕೆ ನೀಡುವುದರ ಮೂಲಕ ಸುದ್ಧಿಯಲ್ಲಿದ್ದಾರೆ. ಈಗ ತಮ್ಮ 50 ನೇ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಹಾಗಾದ್ರೆ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಹೇಗೆ ಗೊತ್ತಾ ? ಹೌದು, ನೀವು ಅದಕ್ಕೆ ಅಚ್ಚರಿ ಪಡಲೇಬೇಕು ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಅತ್ಯಧಿಕ ಸ್ಥಾನಗಳನ್ನು ಪಡೆದಾಗ ಇದು ಎವಿಎಂ ಮತಯಂತ್ರದ ಮ್ಯಾಜಿಕ್ ಮೂಲಕ ಈ ರೀತಿಯ ಫಲಿತಾಂಶ ಬಂದಿದೆ ಎಂದು ಎವಿಎಂ ಬಳಕೆಯ ವಿರುದ್ಧ ಕಿಡಿಕಾರಿದ್ದರು.


ಈಗ ಅದೇ ಎವಿಎಂ ವಿನ್ಯಾಸದಂತಿರುವ ಕೇಕ್ ನ್ನು ಕತ್ತರಿಸಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ಅಲ್ಲದೆ  ಥಾಕ್ರೆಯವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಆಯ್ದ ಪೆಟ್ರೋಲ್ ಪಂಪಗಳಲ್ಲಿ ಒಂದು ಲಿಟರ್ ಪೆಟ್ರೋಲ್ ಗೆ ಕೇವಲ 4 ರೂಗಳಿಂದ 9 ರೂಗಳಿಗೆ ಮಾರಲಾಯಿತು.


ಈ ಕಾರ್ಯಕ್ರಮದ ಕುರಿತಾಗಿ ಪ್ರತಿಕ್ರಿಯಿಸಿರುವ ಎಂಎನ್ಎಸ್ ವಕ್ತಾರ ಸಂದೀಪ ದೇಶಪಾಂಡೆ ಇದನ್ನು 1930 ರ ಮಹಾತ್ಮಾ ಗಾಂಧಿಯವರ ಉಪ್ಪಿನ ಸತ್ಯಾಗ್ರಹಕ್ಕೆ ಹೋಲಿಸಿದರು.