ನವದೆಹಲಿ: ಶಿವಸೇನಾ ಎಂಪಿ ಸಂಜಯ್ ರಾವತ್ ಶುಕ್ರವಾರದಂದು ರಾಜಸ್ತಾನದ ಉಪಚುನಾವಣೆಯಲ್ಲಿ ಹಿನಾಯವಾಗಿ ಸೋತ ಬಿಜೆಪಿಯನ್ನು ಕುಟುಕಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಕುರಿತಾಗಿ ಪ್ರತಿಕ್ರಯಿಸಿರುವ ಅವರು ಗುಜರಾತ್ ಚುನಾವಣೆ ಟ್ರೈಲರ್ ರಾದರೆ ರಾಜಸ್ತಾನದ ಉಪಚುನಾವಣೆ ಇಂಟರ್ವಲ್, ನಾವು ಪೂರ್ಣ ಚಿತ್ರವನ್ನು 2019ರಲ್ಲಿ ನೋಡಬಹುದು ಎಂದು  ಬಿಜೆಪಿಯ ಹೀನಾಯ ಸೋಲನ್ನು ವ್ಯಂಗ್ಯವಾಡಿದ್ದಾರೆ.


ಪ್ರಾರಂಭದಿಂದಲೂ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿವಸೇನಾ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ದೂರ ಸರಿಯುತ್ತಿದೆ.ಅಲ್ಲದೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಗುರುವಾರದಂದು ಕಾಂಗ್ರೆಸ್ ಪಕ್ಷವು ರಾಜಸ್ಥಾನ ಅಲ್ವಾರ್ ಮತ್ತು ಅಜ್ಮೀರ್ ಲೋಕಸಭಾ ಕ್ಷೇತ್ರಗಳು ಮತ್ತು  ಮಂಡಲ್ಘರ್ ವಿಧಾನಸಭಾ ಕ್ಷೇತ್ರವನ್ನು ಉಪಚುನಾವಣೆಯಲ್ಲಿ ಬಿಜೆಪಿಯಿಂದ ವಶಪಡಿಸಿಕೊಂಡ ನಂತರ ಶಿವಸೇನಾದ ಹೇಳಿಕೆ ಬಂದಿರುವುದು ಅತ್ಯಂತ ಮಹತ್ವ ಪಡೆದಿದೆ.


 


with ANI inputs