ನವದೆಹಲಿ: ಆಯುಧ ಪೂಜೆಯ ದಿನವಾದ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ಯಾರಿಸ್ ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ನೆರವೇರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಫ್ರೆಂಚ್ ಬಂದರು ನಗರ ಬೋರ್ಡೆಕ್ಸ್‌ನಲ್ಲಿ 36 ರಫೇಲ್ ಜೆಟ್‌ಗಳಲ್ಲಿ ಮೊದಲನೆಯ ಯುದ್ಧ ವಿಮಾನ ಹಸ್ತಾಂತರದ ಬಳಿಕ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಜಯದಶಮಿಯ ಶುಭ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಲಿದ್ದಾರೆ. ಬಳಿಕ ರಫೇಲ್ ಯುದ್ಧ ವಿಮಾನದಲ್ಲಿ ಪ್ಯಾರಿಸ್ ವಾಯುನೆಲೆಯಿಂದ ಮೊದಲ ಹಾರಾಟದ ಅನುಭವ ಪಡೆಯಲು ಪ್ರಯಾಣ ಬೆಳೆಸಲಿದ್ದಾರೆ.


ವಿಜಯದಶಮಿಯ ಹಿಂದಿನ ದಿನದಂದು ಶಸ್ತ್ರಾಸ್ತಗಳಿಗೆ ಪೂಜೆ ಮಾಡುವುದು ಹಿಂದೂ ಸಂಪ್ರದಾಯವಾಗಿದ್ದು, ಯೋಧರು ತಮ್ಮ ಶಸ್ತ್ರಾಸ್ತ್ರ ಮತ್ತು ಯುದ್ಧ ವಾಹನಗಳ ಪೂಜೆಯನ್ನು ಮಾಡುತ್ತಾರೆ. ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯನ್ನೂ ಒಳಗೊಂಡಂತೆ ರಾಜನಾಥ್ ಕಳೆದ ಹಲವಾರು ವರ್ಷಗಳಿಂದ ಆಯುಧಪೂಜೆ ನೆರವೇರಿಸಿಕೊಂಡು ಬಂದಿದ್ದಾರೆ.


ಸೋಮವಾರದಿಂದ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಕೈಗೊಳ್ಳಲಿರುವ ರಾಜನಾಥ್ ಸಿಂಗ್, ದಸರಾ ಸುಭ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನೂ ಆಚರಿಸಲಿದ್ದಾರೆ. ಇದೇ, ವೇಳೆ ರಾಜನಾಥ್ ಅವರು, ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿಯೊಂದಿಗೆ ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.


ಭಾರತ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಇವುಗಳಲ್ಲಿ ಒಂದನ್ನು ಮಾತ್ರ ಇಂದು ಭಾರತಕ್ಕೆ ರಷ್ಯಾ ಹಸ್ತಾಂತರಿಸಲಿದೆ. ಆದರೆ, ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಿನಲ್ಲಿ ಭಾರತಕ್ಕೆ ಬರಲಿವೆ.