Sadguru Response : ಆಧುನಿಕ ವಿಜ್ಞಾನದ ಪ್ರಕಾರ ನಾನು ಸಾಯಲು ಕೆಲವೇ ತಿಂಗಳುಗಳು ಬಾಕಿಯಿವೆ. ಆದರೆ ನಾನು ಸಾಯುವ ಮೊದಲು ನನ್ನ ಕೊನೆಯ ಆಸೆಯನ್ನು ಈಡೇರಿಸಲು ಯಾರಾದರೂ ಸಹಾಯ ಮಾಡಿ. ಹೀಗೆ ತನ್ನ ಆಸೆಯನ್ನು ಟ್ವಿಟರ್ ನಲ್ಲಿ ಬರೆದು ಅಂಗಲಾಚಿ ಬೇಡಿಕೊಂಡಿದ್ದಾರೆ ಕೇರಳದ ಮಹಿಳೆಯೊಬ್ಬರು. ಈ ಮಹಿಳೆಯ ಟ್ವೀಟ್ ನೋಡುತ್ತಿದ್ದಂತೆಯೇ ಸದ್ಗುರು ಭಾವಾನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ ಕೆಲವೊಮ್ಮೆ ಹೃದಯ ಸ್ಪರ್ಶಿ ಘಟನೆಗಳಿಗೂ ಕಾರಣವಾಗುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಘಟನೆ.


COMMERCIAL BREAK
SCROLL TO CONTINUE READING

ಗಾಯತ್ರಿ ಎಂಬ ಮಹಿಳೆ ತನ್ನ ಕೊನೆಯ ಆಸೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ. "ಸದ್ಗುರುವನ್ನು ಭೇಟಿಯಾಗುವುದು ನನ್ನ ಬಹುದಿನದ ಬಯಕೆಯಾಗಿದೆ. ನಾನು ಬದುಕಲು ಇನ್ನು ಕೆಲವೇ ತಿಂಗಳುಗಳಿವೆ ಎಂದು ಆಧುನಿಕ ವಿಜ್ಞಾನ ಹೇಳುತ್ತದೆ. ಯಾರಾದರೂ ನನಗೆ ಗುರುವನ್ನು ಭೇಟಿ ಮಾಡಲು ಸಹಾಯ ಮಾಡಬಹುದೇ?  ಎಂದು ತಮ್ಮ ಮನದ  ಇಚ್ಚೆಯನ್ನು ತೋಡಿಕೊಂಡಿದ್ದಾರೆ.


ಇದನ್ನೂ ಓದಿ :  ಭಾರತೀಯ ಸೇನಾ ಟ್ರಕ್ ಗೆ ಬೆಂಕಿ,ಉಗ್ರರು ಗ್ರೆನೇಡ್ ಬಳಸಿರುವ ಶಂಕೆ 


ಈ ಯುವತಿಯ ಮನದಾಳದ ಕೋರಿಕೆಗೆ ಸದ್ಗುರು ಉತ್ತರಿಸಿದ್ದಾರೆ. ನಮಸ್ಕಾರ ಗಾಯತ್ರಿ. ಸದ್ಯಕ್ಕೆ ನಾನು ಭಾರತದ ಹೊರಗೆ ಪ್ರಯಾಣಿಸುತ್ತಿದ್ದೇನೆ. ನಾನು ಭಾವನಾತ್ಮಕವಾಗಿ ನಾನು ನಿಮ್ಮೊಂದಿಗಿದ್ದೇನೆ. ಭಾರತಕ್ಕೆ ಹಿಂತಿರುಗಿದ ಮೇಲೆ ಭೇಟಿಯಾಗುವುದಾಗಿ ಹೇಳಿದ್ದಾರೆ.  


ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಗುರು ಪ್ರಪಂಚದಾದ್ಯಂತದ  ಬಹಳಷ್ಟು ಜನ ಅನುಯಾಯಿಗಳನ್ನು ಹೊಂದಿದ್ದಾರೆ.  ಈಶ ಫೌಂಡೆಶನ್ ಮೂಲಕ ನಡೆಸುತ್ತಿರುವ ಯೋಗ ತರಗತಿಗಳು ಲಕ್ಷಾಂತರ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಮತ್ತು ಪ್ರಭಾವವನ್ನು ಬೀರಿರುವುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ :   ಖ್ಯಾತ ನಟ ನಟಿಯರಿಗೆ ಶಾಕ್‌ ನೀಡಿದ ಟ್ವೀಟರ್..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.