ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಂಸದ ಮತ್ತು ಭಾರತದ ಹಿರಿಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕ ಗುರುದಾಸ್ ದಾಸ್‌ಗುಪ್ತಾ ಅವರು ತಮ್ಮ 83 ನೇ ವಯಸ್ಸಿನಲ್ಲಿ ಕೋಲ್ಕತ್ತಾದಲ್ಲಿ ಬುಧವಾರ ನಿಧನರಾದರು. 


COMMERCIAL BREAK
SCROLL TO CONTINUE READING

ಗುಪ್ತಾ ಅವರು ದೀರ್ಘಾವಧಿಯಿಂದ ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಗುರುದಾಸ್ ದಾಸ್‌ಗುಪ್ತಾ 1936 ರ ನವೆಂಬರ್ 3 ರಂದು ಬಂಗಾಳದ ಬರಿಸಾಲ್ (ಇಂದಿನ ಬಾಂಗ್ಲಾದೇಶ) ದಲ್ಲಿ ಜನಿಸಿದರು. ದಾಸ್‌ಗುಪ್ತಾ ಕೋಲ್ಕತಾ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದರು ಮತ್ತು ಸಿಪಿಐನಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಗುರುದಾಸ್ ದಾಸ್‌ಗುಪ್ತಾ 1985 ರಿಂದ 2000 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. 2001 ರಲ್ಲಿ ಗುರುದಾಸ್ ದಾಸ್‌ಗುಪ್ತಾ ಅವರು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.


2004 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 2004 ರ ಲೋಕಸಭಾ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಪನ್ಸ್ಕುರಾ ಲೋಕಸಭಾ ಸ್ಥಾನದಿಂದ ಗೆದ್ದ ನಂತರ ದಗುಪ್ತಾ ಅವರು ಸಂಸತ್ ಬಂದರು. ಇದರ ನಂತರ, 2009 ರಲ್ಲಿ, ಅವರು ಪಶ್ಚಿಮ ಬಂಗಾಳದ ಘಾಟಲ್ ಸ್ಥಾನದಿಂದ ಚುನಾವಣೆಯಲ್ಲಿ ಗೆದ್ದರು.


ಪಶ್ಚಿಮ ಬಂಗಾಳದ ಎಡ ರಾಜಕೀಯದಲ್ಲಿ ಸಿಪಿಐನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಪಶ್ಚಿಮ ಬಂಗಾಳ ಗುರುದಾಸ್ ದಾಸ್‌ಗುಪ್ತಾ ಅವರ ನಿಧನಕ್ಕೆ ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿದೆ. 'ಎಡಪಂಥೀಯ ಮತ್ತು ಕಾರ್ಮಿಕ ವರ್ಗದ ಚಳವಳಿಗೆ ಅವರ ಕೊಡುಗೆ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ' ಎಂದು ಸಿಪಿಎಂ ಬರೆದಿದೆ.



ಗುರುದಾಸ್ ದಾಸ್‌ಗುಪ್ತಾ ಯುಪಿಎ ಸರ್ಕಾರದ ಅಡಿಯಲ್ಲಿ 2 ಜಿ ಸ್ಪೆಕ್ಟ್ರಮ್ ಪ್ರಕರಣದ ತನಿಖೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸದಸ್ಯರಾಗಿದ್ದರು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು "ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ" ಎಂದು ಆರೋಪಿಸಿದ ಅವರು, ಟೆಲಿಕಾಂ ಪರವಾನಗಿ ವಿತರಣೆಯಲ್ಲಿನ ಅಕ್ರಮಗಳ ಬಗ್ಗೆ ತಮಗೆ ಸಂಪೂರ್ಣ ತಿಳಿದಿದೆ ಎಂದು ಆರೋಪಿಸಿದರು. ಸ್ಪೆಕ್ಟ್ರಮ್ ಪರವಾನಗಿಗಳ ಮೌಲ್ಯವನ್ನು ಹೆಚ್ಚಿಸಬೇಕು ಎಂದು ಅಂದಿನ ಕ್ಯಾಬಿನೆಟ್ ಕಾರ್ಯದರ್ಶಿಯ ಟಿಪ್ಪಣಿಯನ್ನು ಅವರು ಉಲ್ಲೇಖಿಸಿದರು.