ನವದೆಹಲಿ:  ಅಮೆರಿಕಾದ ಅವಳಿ ಗೋಪುರದ ಮೇಲೆ ನಡೆದ 9/11 ರ ದಾಳಿಯ 20 ನೇ ವಾರ್ಷಿಕೋತ್ಸವದಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ಇದು ಮಾನವೀಯತೆಯ ಮೇಲಿನ ದಾಳಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಇಂತಹ ದುರಂತಗಳನ್ನು ತಪ್ಪಿಸಬಹುದು ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ


'ಇಂದು ಸೆಪ್ಟೆಂಬರ್ 11 ಅಂದರೆ 9/11! ಪ್ರಪಂಚದ ಇತಿಹಾಸದಲ್ಲಿ ಮಾನವೀಯತೆಯನ್ನು  ಹೊಡೆತ ಬಿದ್ದಿರುವ ದಿನಾಂಕವೆಂದು 'ಎಂದು ಅವರು ಹೇಳಿದರು.ಒಂದು ಶತಮಾನದ ಹಿಂದೆ, ಸೆಪ್ಟೆಂಬರ್ 11, 1893 ರಂದು, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನ ಜಾಗತಿಕ ವೇದಿಕೆಯನ್ನು ತೆಗೆದುಕೊಂಡು ಭಾರತದ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದರು.


ಈ ದಿನ ಸ್ವಾಮಿ ವಿವೇಕಾನಂದರು ಆ ಜಾಗತಿಕ ವೇದಿಕೆ ನಿಂತು ಭಾರತದ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು. ಇಂದು 9/11 ನಂತಹ ದುರಂತಗಳು ಶಾಶ್ವತ ಪರಿಹಾರವನ್ನು ಮಾನವೀಯತೆಯ ಮೌಲ್ಯಗಳ ಮೂಲಕ ಮಾತ್ರವೇ ಅರಿತುಕೊಳ್ಳುತ್ತಿವೆ.


ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ DA ಶೇ.28 ರಷ್ಟು ಹೆಚ್ಚಳ ಆದ್ರೆ, ಕೈಗೆ ಸಿಗಲ್ಲ18 ತಿಂಗಳ ಬಾಕಿ DA


20 ವರ್ಷಗಳ ಹಿಂದೆ ಈ ದಿನ ಒಟ್ಟು 2,977 ಜನರು ಪ್ರಾಣ ಕಳೆದುಕೊಂಡರು. ಸೆಪ್ಟೆಂಬರ್ 11, 2001 ರಂದು, ಯುನೈಟೆಡ್ ಸ್ಟೇಟ್ಸ್ ತನ್ನ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಭಯೋತ್ಪಾದಕ ದಾಳಿಯನ್ನು ಎದುರಿಸಿತು.ಅಲ್ ಖೈದಾ ಕಾರ್ಯಕರ್ತರು ಅಪಹರಿಸಿದ ವಿಮಾನಗಳು ಗೋಪುರಕ್ಕೆ ಅಪ್ಪಳಿಸಿದ ನಂತರ ಕೇವಲ 102 ನಿಮಿಷಗಳ ಅವಧಿಯಲ್ಲಿ, ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳು ಕುಸಿದವು.


ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.