ನವದೆಹಲಿ: ಉದ್ಧವ್ ಠಾಕ್ರೆ ಅವರ ಪಕ್ಷವು ರಾಜ್ಯ ಸರ್ಕಾರವನ್ನು ನಡೆಸುವ ಅನುಭವವನ್ನು ಹೊಂದಿರುವುದರಿಂದ ಮಹಾರಾಷ್ಟ್ರದ ಮೈತ್ರಿಕೂಟದಲ್ಲಿ ಶಿವಸೇನೆ 50:50 ಸೂತ್ರದ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಲ್ಲಿ 220 ಸ್ಥಾನಗಳ ಗುರಿ ಸಾಧಿಸುವ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಸವಾಲಾದ ಕೀರ್ತಿಗೆ ಶರದ್ ಪವಾರ್ ಪಾತ್ರರಾಗಿದ್ದಾರೆ. ಈ ಬಾರಿ ಬಿಜೆಪಿಯ ಸ್ಥಾನಗಳ ಸಂಖ್ಯೆ 2014 ರ ಚುನಾವಣೆಯಲ್ಲಿ 122 ರಿಂದ 105 ಸ್ಥಾನಗಳಿಗೆ ಇಳಿದಿದೆ. ಈ ಸಂದರ್ಭದಲ್ಲಿ ಅಮಿತ್ ಶಾ ಅವರ 50:50 ಸೂತ್ರದ ಭರವಸೆಯನ್ನು ಶಿವಸೇನಾ ನೆನಪಿಸಿದೆ.


1990 ರ ದಶಕದಲ್ಲಿ, ಶಿವಸೇನೆ ಮತ್ತು ಬಿಜೆಪಿಗೆ 50-50 ಸೂತ್ರವಿತ್ತು. ಆದ್ದರಿಂದ ಅವರಿಗೆ ಹಿಂದಿನ ಅನುಭವವಿದೆ, ಆದ್ದರಿಂದ ಶಿವಸೇನಾ ಇದಕ್ಕೆ ಒತ್ತಾಯಿಸಬಹುದು, ಅದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಪವಾರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಹಿಂದೆ ಶಿವಸೇನಾ ಪರವಾಗಿ ಮನೋಹರ್ ಜೋಶಿ 1995-1999ರವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು.


ಕಾಂಗ್ರೆಸ್ಸಿನ ಸ್ಥಳೀಯ ನಾಯಕರು ಎನ್‌ಸಿಪಿಯೊಂದಿಗೆ ಕೆಲಸ ಮಾಡಿದರು. ನಮ್ಮ ನಡುವೆ ಪರಿಪೂರ್ಣ ಸಮನ್ವಯವಿತ್ತು, ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಬರಲಿಲ್ಲ ಆದರೆ ಅವರ ಬದಲಾಗಿ ರಾಹುಲ್ ಗಾಂಧಿ ಬಂದರು. ನಾನು ಇಲ್ಲಿ ಸ್ಥಳೀಯನಾಗಿದ್ದೇನೆ, ಹಾಗಾಗಿ ನಾನು ಉಪಕ್ರಮವನ್ನು ತೆಗೆದುಕೊಳ್ಳಬೇಕಾಯಿತು' ಎಂದು ಪವಾರ್ ಹೇಳಿದರು.