ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಈ ಕುರಿತು ಪಕ್ಷದ ಪರವಾಗಿ ನೋಟಿಸ್ ನೀಡುವಂತೆ ಕೋರಲಾಗಿದೆ. 


COMMERCIAL BREAK
SCROLL TO CONTINUE READING

ಪಿಎಂ ಮೋದಿಯವರನ್ನು ಶ್ಲಾಘಿಸಿರುವ ವಿಷಯದ ಬಗ್ಗೆ ಶಶಿ ತರೂರ್ ಅವರಿಂದ ಸ್ಪಷ್ಟನೆ ಪಡೆಯುತ್ತೇವೆ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಾಪಲ್ಲಿ ರಾಮಚಂದ್ರನ್ ಮಂಗಳವಾರ ಕಣ್ಣೂರಿನಲ್ಲಿ ಹೇಳಿದರು. ಶಶಿ ತರೂರ್ ಸ್ಪಷ್ಟೀಕರಣದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 


ಶಶಿ ತರೂರ್ ಅವರು ಟ್ವೀಟ್ ನಲ್ಲಿ 'ನರೇಂದ್ರ ಮೋದಿ ಏನಾದರೂ ಸರಿಯಾಗಿ ಮಾಡಿದರೆ ಅಥವಾ ಸರಿಯಾದ ಮಾತು ಹೇಳಿದರೆ ಅವರನ್ನು ಮೆಚ್ಚಬೇಕು ಎಂದು ನಾನು ಆರು ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ಅವರು ಏನಾದರೂ ತಪ್ಪು ಮಾಡಿದಾಗ ಮತ್ತು ನಾವು ಅವರನ್ನು ಟೀಕಿಸಿದಾಗ ಅವರಿಗೆ ವಿಶ್ವಾಸಾರ್ಹತೆ ಇರುತ್ತದೆ. ಈ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ವಿರೋಧ ಪಕ್ಷದ ಇತರ ಜನರನ್ನು ನಾನು ಸ್ವಾಗತಿಸುತ್ತೇನೆ, ಅದಕ್ಕಾಗಿ ಆ ಸಮಯದಲ್ಲಿ ನನ್ನನ್ನು ಟೀಕಿಸಲಾಯಿತು ಎಂದು ಬರೆದಿದ್ದರು.