ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಉಚ್ಚಾಟಿತ ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ ಪತಿ ನಟರಾಜನ್ ಮಾರುತಪ್ಪ ಸೋಮವಾರ ತಡರಾತ್ರಿ ಚೆನ್ನೈನ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವಿಧಿವಶರಾದರು.



COMMERCIAL BREAK
SCROLL TO CONTINUE READING

ವೈದ್ಯಕೀಯ ಪ್ರಮಾಣ ಪತ್ರದ ಪ್ರಕಾರ ನಟರಾಜನ್ ಮಾರುತಪ್ಪ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ನಟರಾಜನ್ ಕಳೆದ ವರ್ಷ ಕಿಡ್ನಿ ಹಾಗೂ ಯಕೃತ್ ಕಸಿ ಚಿಕಿತ್ಸೆಗೆ ಒಳಪಟ್ಟಿದ್ದರು.


ನಟರಾಜನ್ ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪೆರೋಲ್ ಅರ್ಜಿಯಲ್ಲಿ ಲಗತ್ತಿಸಿ ಸೋಮವಾರ 15 ದಿನ ಪೆರೋಲ್'ಗೆ ಶಶಿಕಲಾ ಮನವಿ ಸಲ್ಲಿಸಿದ್ದರು. ಶಶಿಕಲಾ ಪೆರೋಲ್ ಕಡತವನ್ನು ಜೈಲು ಅಧಿಕಾರಿಗಳು ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳಿಗೆ ರವಾನೆ ಮಾಡಿದ್ದರು. 


ಸದ್ಯ  ಶಶಿಕಲಾ ಪತಿ ನಟರಾಜನ್ ಸಾವು ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತುರ್ತಾಗಿ ಅರ್ಜಿ ಪರಿಶೀಲನೆ ನಡೆಸಿ  ಪೆರೋಲ್ ಗೆ ಅನುಮತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಪೆರೋಲ್ ಮೇಲೆ ಹನ್ನೊಂದು ಗಂಟೆಗೆ ಜೈಲು ನಿಮಯಗಳ ಅನುಸಾರ ಶಶಿಕಲಾ ಬಿಡುಗಡೆಯಾಗಲಿದ್ದಾರೆ.