ಬಿರಿಯಾನಿ ಹೇಳಿಕೆಗೆ ಚುನಾವಣಾ ಆಯೋಗದಿಂದ ಯೋಗಿ ಆದಿತ್ಯನಾಥ್ ಗೆ ಶೋಕಾಸ್ ನೋಟಿಸ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ಪ್ರತಿಭಟನಾಕಾರರಿಗೆ ಬಿರಿಯಾನಿ ನೀಡುತ್ತಿದ್ದಾರೆ` ಎಂದು ಆರೋಪಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ಪ್ರತಿಭಟನಾಕಾರರಿಗೆ ಬಿರಿಯಾನಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ಫೆಬ್ರವರಿ 7 ರಂದು ಸಂಜೆ 5 ಗಂಟೆಯ ಮೊದಲು ತಮ್ಮ ನಿಲುವನ್ನು ವಿವರಿಸುವಂತೆ ಚುನಾವಣಾ ಆಯೋಗ ಯೋಗಿ ಅವರನ್ನು ಕೇಳಿದೆ. ಕಳೆದ ವಾರ ಫೆಬ್ರವರಿ 1ರಂದು, ರೋಹಿಣಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವಾಗ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಿಲ್ಲ ,ಆದಾಗ್ಯೂ, ಶಾಹೀನ್ ಬಾಗ್ ಮತ್ತು ಇತರ ಪ್ರತಿಭಟನೆಯಲ್ಲಿ ಕುಳಿತ ಜನರಿಗೆ ಅವರ ಸರ್ಕಾರ ಬಿರಿಯಾನಿ ನೀಡಿತು ಎಂದು ಅವರು ಆರೋಪಿಸಿದ್ದರು.
'ಈ ಮೊದಲು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರು ಪಾಕಿಸ್ತಾನದಿಂದ ಹಣವನ್ನು ತೆಗೆದುಕೊಂಡು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುತ್ತಿದ್ದರು. ಕೇಜ್ರಿವಾಲ್ ಅವರ ಪಕ್ಷ ಮತ್ತು ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿದ್ದವು. ಆದರೆ ಅದರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಅದು ನಿಂತುಹೋಯಿತು (370 ನೇ ವಿಧಿಯನ್ನು ರದ್ದುಪಡಿಸುವುದು). ಅದೇ ರೀತಿ ಪಾಕಿಸ್ತಾನ ಭಯೋತ್ಪಾದಕರನ್ನು ನಮ್ಮ ಸೈನಿಕರು ನರಕಕ್ಕೆ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಕೇಜ್ರಿವಾಲ್ ಅವರಂತಹ ಜನರು ಅವರಿಗೆ ಬಿರಿಯಾನಿ ಆಹಾರವನ್ನು ನೀಡುತ್ತಿದ್ದರು, ಆದರೆ ನಾವು ಅವರಿಗೆ ಗುಂಡುಗಳನ್ನು ನೀಡುತ್ತೇವೆ, ”ಎಂದು ಅವರು ನರೇಲಾದಲ್ಲಿ ಹೇಳಿದ್ದರು.