ಪಂಜಾಬ್‌: ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯು ವಿಕ್ರಮಜಿತ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯ ರಿವೇಂಜ್‌ ಆಗಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಸೆಲ್ ಪ್ರಕಾರ ಮೂಸ್ ವಾಲಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ಕಳೆದ ವರ್ಷ ಆಗಸ್ಟ್‌ನಲ್ಲಿ ವಿಕ್ಕಿ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಕೇಸ್‌ಗಾಗಿ ದೆಹಲಿ ಪೊಲೀಸ್ ವಿಶೇಷ ಸೆಲ್ ಇತ್ತೀಚೆಗೆ ಕುಖ್ಯಾತ ದರೋಡೆಕೋರ ನೀರಜ್ ಬವಾನಿಯಾ ಮತ್ತು ಟಿಲ್ಲು ತಾಜ್‌ಪುರಿಯ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಬವಾನಿಯಾ ಮತ್ತು ತಾಜ್‌ಪುರಿಯವರು ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ದರೋಡೆಕೋರರಾದ ​​ಕೌಶಲ್ ಚೌಧರಿ, ದೇವಿಂದರ್ ಭಂಬಿಯಾ ಮತ್ತು ಲಕ್ಕಿ ಪಟಿಯಲ್ ಅವರೊಂದಿಗೆ ತಂಡವನ್ನು ಕಟ್ಟಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಅಯೋಧ್ಯೆ ನಂತರ ಕಾಶಿ, ಮಥುರಾ ಜಾಗೃತಗೊಳ್ಳುತ್ತಿರುವಂತೆ ಕಾಣುತ್ತಿದೆ: ಯೋಗಿ ಆದಿತ್ಯನಾಥ್


ವಿಕ್ಕಿ ಹತ್ಯೆ ಕೇಸ್‌ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಈ ಐದು ಸದಸ್ಯರ ಗ್ಯಾಂಗ್‌ನ ಸುಮಾರು ಹನ್ನೆರಡು ದುಷ್ಕರ್ಮಿಗಳನ್ನು ಬಂಧಿಸಿದ್ದರು. ಬಂಧಿತರನ್ನು ಶಾರ್ಪ್ ಶೂಟರ್ ಸಜ್ಜನ್ ಸಿಂಗ್ ಅಲಿಯಾಸ್ ಭೋಲು, ಅನಿಲ್ ಕುಮಾರ್ ಅಲಿಯಾಸ್ ಲತ್ ಮತ್ತು ಅಜಯ್ ಕುಮಾರ್ ಅಲಿಯಾಸ್ ಸನ್ನಿ ಕೌಶಲ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿಚಾರಣೆ ವೇಳೆ ಬಂಧಿತ ಮೂವರು ವಿಕ್ಕಿ ಕೊಲೆ ಪ್ರಕರಣದಲ್ಲಿ ಮೂಸ್ ವಾಲಾ ಮತ್ತು ಆತನ ಮ್ಯಾನೇಜರ್ ಭಾಗಿಯಾಗಿರುವ ಬಗ್ಗೆ ಬಹಿರಂಗಪಡಿಸಿದ್ದರು ಎನ್ನಲಾಗಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.