ರಾಮೇಶ್ವರ : ಪಾಕ್ ಜಲಸಂಧಿ ಕಚತೀವು ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ತಮಿಳುನಾಡಿನ 8 ಮೀನುಗಾರರನ್ನು ಭಾನುವಾರ ಮುಂಜಾನೆ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಮೀನುಗಾರಿಕೆ ದ್ವೀಪದ ಪಟ್ಟಣ ಮತ್ತು ಮಂಟಪಂನ ಮೀನುಗಾರಿಕಾ ಸಹಾಯಕ ನಿರ್ದೇಶಕ ಗೋಪಿನಾಥ್ ಅವರು, ಕಚತೀವಿ ಬಳಿ ಮೀನುಗಾರಿಕೆಗೆ ಬಲೆ ಬೀಸಿದ್ದ ತಮಿಳುನಾಡಿನ 8 ಮೀನುಗಾರರನ್ನು ಲಂಕಾ ನೌಕಾಪಡೆ ಪೊಲೀಸರು ಬಂಧಿಸಿದ್ದು, ಅವರನ್ನು ದ್ವೀಪ ರಾಷ್ಟ್ರದಲ್ಲಿನ ಕಾರೈನಗರ್ಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ. 


ಇದೇ ಸಂದರ್ಭದಲ್ಲಿ ಎರಡು ದೋಣಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದ್ದು, ತಮಿಳುನಾಡಿನಿಂದ ಬಂದಿರುವ 50 ದೋಣಿಗಳ ಮೀನುಗಾರಿಕೆ ಬಲೆಗಳನ್ನೂ ದ್ವೀಪ ರಾಷ್ಟ್ರದ ಅಧಿಕಾರಿಗಳು ಬೀಳಿಸಿರುವುದಾಗಿ ಗೋಪಿನಾಥ್ ತಿಳಿಸಿದ್ದಾರೆ. 


ಈ ಹಿಂದೆ ನ.೧೭ರಂದು ದ್ವೀಪ ದೇಶದ ನೆಡುಂತೇವು ಬಳಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ನಾಗಾಪಟ್ಟನಂ ಜಿಲ್ಲೆಯ ತಿಡಿರ್ ಕುಪ್ಪಂ ಗ್ರಾಮದ ಹತ್ತು ಮೀನುಗಾರನ್ನು ಲಂಕಾದ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದರು.


ಒಟ್ಟಾರೆ ಕಳೆದ ಮೂರು ತಿಂಗಳುಗಳಲ್ಲಿ 117 ಮೀನುಗಾರರನ್ನು ಬಂಧಿಸಲಾಗಿದೆ.