ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರವು ಶುಕ್ರವಾರ ಪ್ರಮುಖ ಹಿನ್ನಡೆ ಅನುಭವಿಸಿದೆ. ಮೂಲದ ಪ್ರಕಾರ, ಚುನಾವಣಾ ಆಯೋಗವು ಲಾಭದ ಹುದ್ದೆಯಲ್ಲಿದ್ದ ಕಾರಣಕ್ಕಾಗಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) 20 ಶಾಸಕರನ್ನು  ಅನರ್ಹ ಎಂದು ಘೋಷಿಸಿದೆ. ಮೂಲಗಳ ಪ್ರಕಾರ ಚುನಾವಣಾ ಆಯೋಗವು ತನ್ನ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಳುಹಿಸಿದೆ. ರಾಷ್ಟ್ರಪತಿ ಈ ನಿರ್ಧಾರಕ್ಕೆ ಅಂಕಿತ ಹಾಕಿದರೆ, ಆಮ್ ಆದ್ಮಿ ಪಾರ್ಟಿಯ ಈ 20 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ. ಆದಾಗ್ಯೂ, ಅವರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರುವ ಒಂದು ಮಾರ್ಗವನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣಾ ಆಯೋಗ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪಕ್ಷದ ಹೇಳುತ್ತದೆ. ಅಲ್ಲದೆ ಈ ವಿಷಯವನ್ನು ನ್ಯಾಯಾಲಯದಲ್ಲಿ ನಿರ್ಧರಿಸಬೇಕು.


ಚುನಾವಣಾ ಆಯೋಗದಿಂದ ಅನರ್ಹರಾದ ಶಾಸಕರ ಹೆಸರುಗಳು ಹೀಗಿವೆ:


1. ಶರದ್ ಕುಮಾರ್ (ನರೇಲಾ ಅಸೆಂಬ್ಲಿ)
2. ಸೋಮದಾತ್ತಾ (ಸದರ್ ಬಜಾರ್)
3. ಆದರ್ಶ್ ಶಾಸ್ತ್ರಿ (ದ್ವಾರಕಾ)
4. ಅವತಾರ್ ಸಿಂಗ್ (ಕಲ್ಕಾಜಿ)
5. ನಿತಿನ್ ತ್ಯಾಗಿ (ಲಕ್ಷ್ಮಿ)
6. ಅನಿಲ್ ಕುಮಾರ್ ಬಾಜ್ಪಾಯಿ (ಗಾಂಧಿ ನಗರ)
7. ಮದನ್ ಲಾಲ್ (ಕಸ್ತೂರ್ಬಾ ನಗರ)
8. ವಿಜೇಂದ್ರ ಗಾರ್ಗ್ ವಿಜಯ್ (ರಾಜೇಂದ್ರ ನಗರ)
9. ಶಿವಚರಣ್ ಗೋಯಲ್ (ಮೋತಿ ನಗರ)
10. ಸಂಜೀವ್ ಝಾ (ಬರಾಧಿ)
11. ಕೈಲಾಶ್ ಗಾಹ್ಲೋಟ್ (ನಜಫ್ಗಢ್)
12. ಸರಿತಾ ಸಿಂಗ್ (ರೋಹ್ತಾಶ್ ನಗರ)
13. ಅಲ್ಕಾ ಲಂಬಾ (ಚಾಂದನಿ ಚೌಕ್)
14. ನರೇಶ್ ಯಾದವ್ (ಮೆಹ್ರಾಲಿ)
15. ಮನೋಜ್ ಕುಮಾರ್ (ಕೊಂಡಾಳಿ)
16. ರಾಜೇಶ್ ಗುಪ್ತಾ (ವಾಜಿರ್ಪುರ)
17. ರಾಜೇಶ್ ರಿಷಿ (ಜನಕುಪುರಿ)
18. ಸುಖ್ಬಿರ್ ಸಿಂಗ್ ದಲಾಲ್ (ಮುಂಡ್ಕಾ)
19. ಜರ್ನೈಲ್ ಸಿಂಗ್ (ತಿಲಕ್ ನಗರ)
20. ಪ್ರವೀಣ್ ಕುಮಾರ್ (ಜಂಗ್ಪುರಾ)