ಬೆಂಗಳೂರು : ಮೋದಿ ಸಚಿವ ಸಂಪುಟದಲ್ಲಿ ಹೊಸದಾಗಿ ಸ್ಥಾನ ಪಡೆದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹಳೆ ವಿವಾದದ ವೀಡಿಯೊ ಒಂದು ಈಗ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

"ಎಲ್ಲಿಯವರೆಗೂ ಜಗತ್ತಿನಲ್ಲಿ ಇಸ್ಲಾಂ ಇರುತ್ತೆ ಅಲ್ಲಿಯವರೆಗೂ ಭಯೋತ್ಪಾದನೆ ಇರುತ್ತದೆ, ಎಲ್ಲಿಯವರೆಗೂ ನಾವು ಇಸ್ಲಾಂ ಅನ್ನು ಮೂಲೋತ್ಪಾದನೆ ಮಾಡೋದಿಲ್ಲ ಅಲ್ಲಿಯವರೆಗೂ ಭಯೋತ್ಪಾದನೆಯನ್ನು ಕಿತ್ತುಹಾಕಲು ಸಾಧ್ಯವಿಲ್ಲ". ಪತ್ರಿಕೆಗಳಲ್ಲಿ ಬರೆಯೋ ಅವಕಾಶ ಇದ್ದರೆ ಇದೇ ಶಬ್ಧಗಳಲ್ಲಿ ಬರೆಯಿರಿ. 


'ಇಸ್ಲಾಂ ಜಗತ್ತಿನ ಶಾಂತಿಗೆ ಇಟ್ಟಿರತಕ್ಕಂತಹ ಬಾಂಬ್, ಇಸ್ಲಾಂ ಇರುವ ತನಕ ಜಗತ್ತಿನಲ್ಲಿ ಶಾಂತಿ ಇಲ್ಲ' ಎಂದು ಸಚಿವ ಅನಂತ್ ಕುಮಾರ್ ಹೆಗಡೆ ಈ ಹಿಂದೆ 2016ರಲ್ಲಿ ಅನಂತ್ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಆವರು ಸಚಿವರಾಗಿ ಸ್ಥಾನ ಪಡೆದ ಬಳಿಕ ಬಹಳ ಸದ್ದು ಮಾಡ ತೊಡಗಿದೆ.