Vinayak Damodar Savarkar : ಕಾಂಗ್ರೆಸ್‌ ಪ್ರಸ್ತುತ ಇಂಡಿಯಾ ಜೋಡೋ ಯಾತ್ರೆಯಿಂದ ಭಾರಿ ಸುದ್ದಿಯಲ್ಲಿದೆ. ಈ ಯಾತ್ರೆಯ ವೀಡಿಯೋಗಳು ಮತ್ತು ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಆದರೆ, ಈ ಬಾರಿಯ ಈ ಯಾತ್ರೆ ಸಂಬಂಧಿಸಿದ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ವಾಸ್ತವವಾಗಿ ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ ಆರಂಭವಾದ 14ನೇ ದಿನದಂದು ದೊಡ್ಡ ಪ್ರಮಾದವೊಂದು ನಡೆದಿದೆ. ಈ ಯಾತ್ರೆಯ ಒಂದು ಪೋಸ್ಟರ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿನಯದ್ ದಾಮೋದರ್ ಸಾವರ್ಕರ್ ಅವರ ಫೋಟೋ ಒಂದು ರಾರಾಜಿಸುತ್ತಿದೆ.


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಈ ಪೋಸ್ಟರ್ ಅನ್ನು ಎರ್ನಾಕುಲಂನಲ್ಲಿ ಹಾಕಲಾಗಿದೆ. ಈ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನ ಅರಿತ ಕಾಂಗ್ರೆಸ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಪೋಸ್ಟರ್‌ನಲ್ಲಿರುವ ಸಾವರ್ಕರ್ ಅವರ ಫೋಟೋ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಅಂಟಿಸಿ ಮುಚ್ಚಲಾಗಿದೆ.


ಇದನ್ನೂ ಓದಿ : PM CARES Fund : ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿ ರತನ್ ಟಾಟಾ : ಸಲಹಾ ಮಂಡಳಿಯಲ್ಲಿ ಸುಧಾಮೂರ್ತಿ


ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ


ಅಷ್ಟೊತ್ತಿಗಾಗಲೇ ತಡವಾಗಿದ್ದರಿಂದ ಹಲವು ಬಿಜೆಪಿ ನಾಯಕರು ಈ ಪೋಸ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಟ್ವೀಟ್ ಮಾಡಿ, 'ರಾಹುಲ್ ಜೀ, ನೀವು ಎಷ್ಟೇ ಪ್ರಯತ್ನಿಸಿದರೂ, ಇತಿಹಾಸ ಮತ್ತು ಸತ್ಯ ಹೊರಬರುತ್ತದೆ. ಸಾವರ್ಕರ್ ವೀರ! ಮರೆಮಾಚುವವರು "ಹೇಡಿಗಳು" ಎಂದು ಬರೆದುಕೊಂಡಿದ್ದಾರೆ.


ಸಾವರ್ಕರ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿವೆ. ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಜೆಪಿ ಪರಿಗಣಿಸಿದರೆ, ಸ್ವಾತಂತ್ರ್ಯ ಚಳವಳಿಗೆ ಅವರ ಕೊಡುಗೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತದೆ. ಬ್ರಿಟಿಷರ ಕ್ಷಮೆ ಕೇಳುವ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕಳೆದ ಕೆಲವು ಸಮಯದಿಂದ ಸಾವರ್ಕರ್ ಅವರ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಯಾಗುತ್ತಿವೆ.


ಇದನ್ನೂ ಓದಿ : Congress President Election : ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೆ ರಾಜಸ್ಥಾನದ ಸಿಎಂ ಸ್ಥಾನ ಯಾರಿಗೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.