ನವದೆಹಲಿ:  ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ  ಕುನ್ಜರ್ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್ಗಳೊಂದಿಗೆ ಮೂರು ಉಗ್ರರನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ಬಂಧಿತ ಭಯೋತ್ಪಾದಕರನ್ನು ಎಲ್ಲಾ ಉತ್ತರ ಕಾಶ್ಮೀರದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಕುರಿತಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇವರ ಮೇಲೆ  ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.


ಇನ್ನೊಂದೆಡೆಗೆ ಕಾಶ್ಮೀರದ  ಪೂಂಚ್ನ ಖರಿ ಕರ್ಮಾರದಲ್ಲಿ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದೆ.


ಇಲ್ಲಿನ ಸ್ಥಳೀಯರು ಹೇಳುವಂತೆ, ಇಂದು ಬೆಳೆಗ್ಗೆ 4 ಎ ರಿಂದ ಸಣ್ಣ ಶಸ್ತ್ರಾಸ್ತ್ರಗಳ ಗುಂಡು ಹಾರಿಸಿ ದಾಳಿ ಮಾಡಿದ ಉಗ್ರರು ಸಾಯಂಕಾಲ 3.40 ಕ್ಕೆ ಭಾರಿ ಗಾತ್ರದ ಶೆಲ್ ಗಳ ಮೂಲಕ ಉಗ್ರರು ದಾಳಿ ಮಾಡಿದ್ದಾರೆಂದು  ಎಎನ್ಐ ವರದಿ ಮಾಡಿದೆ.