ಕೋಲ್ಕತಾ: ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಗೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ. ಹನ್ಸ್ಕಾಲಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಕೃಷ್ಣಗಂಜ್ನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಶನಿವಾರ ಸಂಜೆ ಕೆಲವು ಅಪರಿಚಿತರು ಹತ್ಯೆಗೈದಿದ್ದಾರೆ.


ಕೃಷ್ಣಗಂಜ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಸತ್ಯಜಿತ್ ಬಿಸ್ವಾಸ್ ರಾತ್ರಿ 8 ಗಂಟೆಗೆ ಮಾಜಿಯಾ-ಫುಲ್ಬಾರಿ ಪ್ರದೇಶದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮಕ್ಕೆ ತೆರಳುವ ವೇಳೆ ಈ ಕೃತ್ಯ ನಡೆದಿದೆ. ಇದು ಬಿಜೆಪಿ ಕೃತ್ಯ ಎಂದು ಟಿಎಂಸಿ ಆರೋಪಿಸಿದೆ. ಆದರೆ ಆರೋಪ ನಿರಾಕರಣೆ ಮಾಡಿರುವ ಬಿಜೆಪಿ, ಇದು ಟಿಎಂಸಿ ಆಂತರಿಕ ಕಲಹದ ಪರಿಣಾಮ ಎಂದು ಹೇಳಿದೆ.


ಮಾತುವಾ ಸಮುದಾಯದ ನಾಯಕರೂ ಆಗಿದ್ದ ಬಿಸ್ವಾಸ್ ಪ್ರದೇಶದ ಜನಪ್ರಿಯ ಟಿಎಂಸಿ ಮುಖಂಡರಾಗಿದ್ದರು.